tag:blogger.com,1999:blog-6229814106832121013.post4524272355075344371..comments2024-02-04T17:05:38.875+05:30Comments on ನಂದೊಂದ್ಮಾತು: ಅಧ್ಯಾಪನ ವೃತ್ತಿ ಅಂದು - ಇಂದುAnonymoushttp://www.blogger.com/profile/14427629550874212514noreply@blogger.comBlogger1125tag:blogger.com,1999:blog-6229814106832121013.post-7674460992956685202014-03-05T12:58:10.204+05:302014-03-05T12:58:10.204+05:30ಆತ್ಮಕಥನಗಳಲ್ಲಿ/ನೆನಪುಗಳ ಸಂಕಲನದಲ್ಲಿ ಸಾಮಾನ್ಯವಾಗಿ ಅದನ್ನ...ಆತ್ಮಕಥನಗಳಲ್ಲಿ/ನೆನಪುಗಳ ಸಂಕಲನದಲ್ಲಿ ಸಾಮಾನ್ಯವಾಗಿ ಅದನ್ನು ಬರೆದವರು ತಾವು ಓದುಗರ ಕಣ್ಣಲ್ಲಿ , ಮನದಲ್ಲಿ ಹೇಗೆ ಕಾಣಿಸಿಕೊಳ್ಳಬೇಕು ಎಂಬ ಎಚ್ಚರದಿಂದ ಬರೆಯುತ್ತಾರೆ. ತಮ್ಮ ಕೆಲವು ನಡೆ ನುಡಿಗಳು ಓದುಗರ ಎದುರು ತಮ್ಮ ವ್ಯಕ್ತಿತ್ವ ಅಧಿಕಾರ/ಪ್ರಭುತ್ವಗಳ ಎದುರು do not care ಮಾದರಿಯದ್ದು ಎಂದು ವೈಭವೀಕರಿಸಿಕೊಳ್ಳುತ್ತಾರೆ. ಅದು ನಿಜವೋ ಸುಳ್ಳೋ ಅರ್ಧ ಸತ್ಯವೋ ಎಂದು ನಿರ್ಣಯಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ತಾವು ಉದಾಹರಿಸಿರುವ ಮೊದಲ ಎರಡು ಘಟನೆಗಳಲ್ಲಿ ಅವರು ಅಷ್ಟು harsh ಆಗಿ ಮಾತನಾಡಿದ್ದರ ಬಗ್ಗೆ ಅನುಮಾನಗಳು ಸಹಜವಾಗಿ ಓದುಗರಿಗೆ ಉಂಟಾಗುತ್ತದೆ. ಇನ್ನು ಮೂರನೆಯ ಘಟನೆ ಬಗ್ಗೆ - ಇಂದು ಕಾಲ ಬದಲಾಯಿಸಿದೆ. ಇದು ಸ್ಪರ್ಧಾತ್ಮಕ ಯುಗ. ಒಂದು ತಾಲ್ಲೂಕು ಕೆಂದ್ರದಲ್ಲೇ ನಾಲ್ಕೈದು ಟ್ಯೂಶನ್ ಕೇಂದ್ರಗಳಿರುತ್ತವೆ. ಇನ್ನು ಬೆಂಗಳೂರಿನಂತಹ ಮಹಾನಗರಗಳಲ್ಲಿ ಒಂದು ಬಡಾವಣೆಗೇ ನಾಲ್ಕೈದು ಇರುತ್ತವೆ. ಆದ್ದರಿಂದ ಮನೆಗೆ ಹೋಗಿ ಪಾಠ ಮಾಡುವುದರಲ್ಲಿ ತಪ್ಪೇನೂ ಕಾಣುತ್ತಿಲ್ಲ. ಜೀವನ ನಡೆಯಬೇಕಲ್ಲ. <br />-ಮು ಅ ಶ್ರೀರಂಗ ಬೆಂಗಳೂರು ೫-೩-೨೦೧೪ srirangahttps://www.blogger.com/profile/14134929258897892694noreply@blogger.com