Tuesday, January 25, 2011

ನಿರ್ಮೋಹಿ ಬರಹಗಾರನ ಮೋಹಕ ಪಾತ್ರ ಪ್ರಪಂಚ : ಅಬ್ದುಲ್ ರಶೀದ್

ಕೆಂಡಸಂಪಿಗೆ ಬಳಗದ ಹಿರಿಯ ಲೇಖಕ ಎಸ್.ಎಂ.ಪೆಜತ್ತಾಯರ ಬರಹಗಳ ಸಂಗ್ರಹ ‘ರೈತನಾಗುವ ಹಾದಿಯಲ್ಲಿ’ ಮಂಗಳವಾರ ಸಂಜೆ ಆರು ಗಂಟೆಗೆ ಬೆಂಗಳೂರಿನ ನಯನ ಸಭಾಂಗಣದಲ್ಲಿ ಬಿಡುಗಡೆಯಾಗಲಿದೆ.ಪೆಜತ್ತಾಯರ ಪುಸ್ತಕಕ್ಕೆ ಅಬ್ದುಲ್ ರಶೀದ್ ಬರೆದ ಮುನ್ನುಡಿ ಇಲ್ಲಿದೆ

ಹಿರಿಯರಾದ ಮಧುಸೂದನ ಪೆಜತ್ತಾಯರ ಈ ಪುಸ್ತಕದ ಮೊದಲಲ್ಲಿ ತುಂಬ ಪ್ರೀತಿ, ಅಪಾರ ಗೌರವ ಮತ್ತು ಸ್ವಲ್ಪ ಸಂಕಟದಿಂದ ಕೆಲವು ಸಾಲುಗಳನ್ನು ಬರೆಯುತ್ತಿರುವೆ. ತುಂಬ ಪ್ರೀತಿ ಅವರ ಬರಹದಲ್ಲಿರುವ ಜೀವ ಪ್ರೀತಿಗಾಗಿ. ಅಪಾರ ಗೌರವ ಅವರ ಜೀವನದ ಸಾಹಸಗಳಿಗಾಗಿ. ಸ್ವಲ್ಪ ಸಂಕಟ ಅವರ ಯೌವನದ ದಿನಗಳಲ್ಲಿ ಅವರ ಸಾಹಸಗಳ ಜೊತೆ ಇರಲಾಗದ ತಲೆಮಾರಿನವನಾಗಿ ಹುಟ್ಟಿದ್ದಕ್ಕಾಗಿ. ಇಷ್ಟು ಒಳ್ಳೆಯ ಮನಸ್ಸಿನ,ಇಷ್ಟು ತುಂಟ ಹಠಮಾರಿತನದ, ಇಷ್ಟು ಗಟ್ಟಿ ನಿರ್ಧಾರಗಳ, ಇಷ್ಟೊಂದು ಓದಿಕೊಂಡ, ಎಲ್ಲವನ್ನೂ ಮಾಡಿ ಮುಗಿಸಿ ಆಮೇಲೆ ಬರೆಯಲು ಕೂತ ನಿರ್ಮೋಹಿ ಬರಹಗಾರನೊಬ್ಬನ ಸಂಗದಲ್ಲಿ ಆತನ ಕರ್ಮಭೂಮಿಯ ದಿನಗಳಲ್ಲಿ ನಾನೂ ಇದ್ದಿದ್ದರೆ ಎಂದು ಯೋಚಿಸಿ ಕಣ್ಣು ತುಂಬಿಕೊಳ್ಳುತ್ತದೆ. ಈ ಪುಸ್ತಕದ ಕೊನೆಯಲ್ಲಿ ಮಲಯಾಳಿ ಕಣ್ಣನ್ ಮೇಸ್ತ್ರಿ ಎಂಬ ಮನುಷ್ಯನೊಬ್ಬ ಬರುತ್ತಾನೆ. ಮರದ ಕೂಪಿನ ಮೇಸ್ತ್ರಿ ಆತ. ಒಂಥರಾ ದೈವಾಂಶ ಸಂಭೂತನಂತೆ ಆತ ಕಾಣಿಸುತ್ತಾನೆ. ಆತನಿಂದ ಬೀಳ್ಕೊಳ್ಳುವಾಗ ಪೆಜತ್ತಾಯರ ಕಣ್ಣುಗಳು

ನನ್ನ ಮ್ಯಾನ್ ಫ್ರೈಡೇ ಚೀಂಪ!: ಪೆಜತ್ತಾಯರ ಪುಸ್ತಕದ ಕೆಲವು ಹಾಳೆಗಳು


ಎಸ್.ಎಂ. ಪೆಜತ್ತಾಯ

ಕೆಂಪಿಯಿಂದ ಬಲವಾದ ಒದೆ ತಿಂದ ಮೇಲೆ ನನಗೆ ಹಾಲು ಕರೆಯುವ ವಿಚಾರ ಎಂದರೆ ಭಯ! ದನಗಳನ್ನು ನೋಡಿಕೊಂಡು ಹಾಲು ಕರೆಯುವ ಕಾರ್ಯದಲ್ಲಿ ಸಹಾಯ ಮಾಡುವ ಮನುಷ್ಯನೊಬ್ಬ ಸಿಕ್ಕಿದ್ದರೆ? ಅಂತ ಆ ದಿನ ನಾನು ನಿಜವಾಗಲೂ ಹಂಬಲಿಸಿದೆ. ನಾನು ಫಾರ್ಮಿನಲ್ಲಿ ಏಕಾಂತ ವಾಸ ಶುರು ಮಾಡಿ ಅಂದಿಗೆ ಸುಮಾರು ನಾಲ್ಕು ತಿಂಗಳಾಗಿದ್ದುವು. ನನ್ನ ಅದೃಷ್ಟಕ್ಕೆ ಆ ದಿನವೇ ನನಗೊಬ್ಬ ಮ್ಯಾನ್ ಫ್ರೈಡೇ ಸಿಕ್ಕಿದ! ಹಾಲು ಹಿಂಡಲು ಹೋಗಿ, ಕೆಂಪಿ ದನದಿಂದ ಸಕತ್ತಾಗಿ ಒದೆ ತಿಂದು ಮುಖದ ಬಲ ಪಾರ್ಶ್ವವನ್ನು ಊದಿಸಿಕೊಂಡ ಸಂಗತಿ ಯಾರಿಗೂ ತಿಳಿದಿಲ್ಲ ಅಂತ ನಾನು ತಪ್ಪಾಗಿ ಊಹಿಸಿದ್ದೆ. ಬೆಳಗ್ಗೆ ನನಗೆ ಹಾಲು ತಂದುಕೊಟ್ಟ ದನ ಮೇಯಿಸುವ ಹುಡುಗ ಬಾಲು ನನ್ನೊಡನೆ ಆ ದಿನ ಮಾತನಾಡುವಾಗ ಉಕ್ಕಿಬರುತ್ತಾ ಇದ್ದ ನಗುವನ್ನು ಕಷ್ಟಪಟ್ಟು ತಡೆ ಹಿಡಿಯುತ್ತಾ ಇದ್ದುದು ನನ್ನ ಗಮನಕ್ಕೆ ಬಂದಿತು. ನಮ್ಮಲ್ಲಿ ಕೆಲಸಕ್ಕೆ ಬರುತ್ತಾ ಇದ್ದ ಎಲ್ಲ ಆಳುಗಳೂ ಅಂದು ನನ್ನ ಮುಖ ನೋಡಿದ ಕೂಡಲೇ ನಗುವನ್ನು ಕಷ್ಟಪಟ್ಟು ಅದುಮಿ ಇಟ್ಟುಕೊಳ್ಳುವುದು ನನಗೆ ಕಂಡು ಬಂತು. ಅವರು ನನ್ನನ್ನು ಕಂಡು ನಕ್ಕರೆ ನನಗೇನು ಅಂತ ನಾನು ನಿರ್ಲಿಪ್ತ ಭಾವದಿಂದ ಸುಮ್ಮನೆ ಇದ್ದೆ.


ಹಿರಿಯರಾದ ಪೆಜತ್ತಾಯರ ಕುರಿತು ಕಿರಿಯಳಾದ ನಾಗಶ್ರೀ


ನಾಗಶ್ರೀ ಶ್ರೀರಕ್ಷ
ಪೆಜತ್ತಾಯರನ್ನು ಕಂಡು ನನಗೆ ನಿಜಕ್ಕೂ ವಯಸ್ಸಾಗಿದೆ ಅನ್ನಿಸಿತು. ಅಥವಾ ವಯಸ್ಸಾಗುವುದು ಎಂದರೇನೆಂದು ಮರು ಮನನ ಮಾಡಿಕೊಳ್ಳ ಬೇಕು. ಆ ರೀತಿ ಟೊಂಕ ಕಟ್ಟಿಕೊಂಡು ಬದುಕನ್ನು ಗೇಯುವುದೆಂದರೆ ಆಗು ಹೋಗುವುದಲ್ಲ ಎಂದುಕೊಂಡೆ. ಸುಮ್ಮನೆ ಪ್ರಕೃತಿ, ಪ್ರೀತಿ ಪ್ರೇಮವೆಂದು ಕವಿತೆ ಗೀಚುವುದು ಫಿಲಾಸಫಿಯ ನಾಲ್ಕು ಸಾಲು ಓದಿಕೊಂಡು ಬದುಕು ಎಷ್ಟು ನಿರರ್ಥಕವೆಂದು ಮಂಕಾಗಿ ಕುಳಿತುಕೊಳ್ಳುವುದೆಲ್ಲಾ ಚಳಿ ಬಿಟ್ಟು ಓಡಿ ಹೋದಂತಾಯಿತು ಅವರನ್ನು ಓದಿ, ಅವರನ್ನು ನೋಡಿ. ಅವರ ಬಗ್ಗೆ ಬರೆಯಲೂ ಅವರಷ್ಟೇ ಲವಲವಿಕೆ ಬೇಕೆನಿಸಿತು.

ಕೈಯ್ಯಲ್ಲಿ ಕಾಫಿ ಲೋಟವನ್ನು ಹಿಡಿದುಕೊಂಡು, ಕೆನೆಕಟ್ಟಿದ್ದನ್ನು ಸರಿಸಿ, ಹಾಗೇ ಅಲ್ಲಿಲ್ಲಿ ನೋಡಿಕೊಂಡು ಮುದುರಿಕೊಳ್ಳುವ ಮುಜುಗರವೇ ಆಗಿರಲಿಲ್ಲ ಮೊದಲ ಬಾರಿ ಮನೆಗೆ ಹೋದಾಗ. ಹೆಜ್ಜೆ ಇಡಲು ಕಷ್ಟಪಡುತ್ತಿದ್ದ

No comments: