Friday, November 11, 2011

ಶೃಂಗೇರಿ ಬಗ್ಗೆ ಕುವೆಂಪು ಕವಿತೆ ಗೊತ್ತಾ?

ಶ್ರೀಮಚ್ಛಂಕರ ಗುರುವರ ಪುರವಿದು
ಪಾವನಮಾಗಿಹ ಶೃಂಗೇರಿ;
ಪರಮತೆಗಾಲಯ, ರಮ್ಯತೆಗಾಶ್ರಯ,
ಬ್ರಹ್ಮಾನಂದಾವಾಸಮಿದು!
ಪುಣ್ಯ ತೀರ್ಥಜಲದಿಂದ ಮೆರೆವಮಲ
ತುಂಗಾ ತೀರೋದ್ಯಾನಮಿದು;
ಶಂಕರ ಕೇಸರಿ ಗರ್ಜಿಸುತಲೆದ ಮ-
ಹಾ ಅದ್ವೈತಾರಣ್ಯಮಿದು!
ಶೃಂಗೇರಿ ಬಗ್ಗೆ ಕುವೆಂಪು ಕವಿತೆ ಗೊತ್ತಾ? ಅದರ ಬಗ್ಗೆ ಸ್ವತಃ ಕವಿಯ ಅನಿಸಿಕೆ ಏನು ಗೊತ್ತಾ?? ಅದ್ಯಾಕೆ ಎಲ್ಲೂ ಪ್ರಕಟವಾಗಲಿಲ್ಲ ಅನ್ನೋದು ಗೊತ್ತಾ??? ಇವೆಲ್ಲಾ ಗೊತ್ತಾಗಬೇಕು ಅಂದರೆ 14.11.2011ರ ಸೋಮವಾರದವರೆಗೂ ಕಾಯಬೇಕು!!!
ಹಾಗೆ ನೋಡಿದರೆ ನಿಮ್ಮನ್ನು ಕಾಯಿಸಬೇಕು ಅನ್ನೋದು ನನ್ನ ಉದ್ದೇಶ ಅಲ್ಲ. 
ಕೆಲವು ಸ್ನೇಹಿತರು ವಾರಕ್ಕೊಂದೇ ಪೋಸ್ಟ್ ಏಕೆ? ಎರಡು ಮೂರನ್ನಾದರೂ ಹಾಕಬಹುದಲ್ಲ. ಕುವೆಂಪು ಅವರ ಬಗ್ಗೆ, ಅವರ ಸಾಹಿತ್ಯದ ಬಗ್ಗೆ ಹೆಚ್ಚೆಚ್ಚು ತಿಳಿದುಕೊಳ್ಳಲು ನಿಮ್ಮ ಲೇಖನಗಳು ಸಹಕಾರಿಯಾಗಿವೆ ಅಂತ ಕೇಳುತ್ತಿದ್ದಾರೆ. 
ದಿನಕ್ಕೊಂದು ಪೋಸ್ಟ್ ಮಾಡಬಹುದು, ಅಷ್ಟೊಂದು ಕವಿತೆಗಳಿದಾವೆ. ಆದರೆ ಎಷ್ಟು ಬರಿತೇನೆ, ಅನ್ನೋದಿಕ್ಕಿಂತ ಅದನ್ನು ಸಾಧ್ಯವಾದಷ್ಟು ಆಕರ್ಷಕವಾಗಿ ನಿಮ್ಮ ಮುಂದೆ ಪ್ರೆಸೆಂಟ್ ಮಾಡಬೇಕು ಅನ್ನೋದು ನನ್ನ ಉದ್ದೇಶ. ಅದಕ್ಕೆ ವಾರಕ್ಕೊಂದೇ ಲೇಖನ ಅನ್ನೊ ಮಿತಿಯನ್ನ ನನಗೆ ನಾನೇ ಹಾಕಿಕೊಂಡು ಬಿಟ್ಟಿದ್ದೇನೆ. ಚೆನ್ನಾಗಿ ಹಸಿದಾಗ ಊಟದ ರುಚಿ ಹೆಚ್ಚು ಅಲ್ಲವೆ?
ನಿಮ್ಮೆಲ್ಲರ ಸಹಕಾರ ಪ್ರೋತ್ಸಾಹಕ್ಕೆ ನಾನು ಚಿರಋಣಿ. 
ಶುಭದಿನ. 
ಮತ್ತೆ ಭೇಟಿಯಾಗೋಣ.

No comments: