ಸುಮಾರು ಹದಿನಾರನೆಯ ಶತಮಾನದ ಆದಿಭಾಗದಲ್ಲಿ ಜೀವಿಸಿದ್ದ ಮಂಗರಸಕವಿಯನ್ನು ಅಡುಗೆ ಶಾಶ್ತ್ರಕ್ಕೆ ಸಂಬಂಧಪಟ್ಟಂತೆ ಕನ್ನಡದಲ್ಲಿ ಮೊದಲ ಸ್ವತಂತ್ರ ಕೃತಿ ಬರೆದವನು. ಅದುವರೆಗೆ ಕನ್ನಡದಲ್ಲಿ ಬೇರೆ ಇಬ್ಬರು ಮಂಗರಸ ಕವಿಗಳು ಆಗಿ ಹೋಗಿದ್ದರಿಂದ ಈ ಪಾಕಶಾಶ್ತ್ರದ ಮಂಗರಸನನ್ನು ಮೂರನೆಯ ಮಂಗರಸ ಎಂದೇ ಗುರುತಿಸಲಾಗುತ್ತದೆ. ಮೂರನೆಯ ಮಂಗರಸಕವಿಯ ’ಜಯನೃಪಕಾವ್ಯ’, ’ನೇಮಿಜಿನೇಶ ಸಂಗತಿ’, ’ಸಮ್ಯಕ್ತ್ವ ಕೌಮುದಿ’ ಮತ್ತು ’ಸೂಪಶಾಸ್ತ್ರ’ ನಾಲ್ಕೂ ಕಾವ್ಯಗಳಲ್ಲಿ ಸರಸ್ವತಿಯ ಸ್ತುತಿಯಿದೆ.
ಪರಬ್ರಹ್ಮಹೃದಯಸರಸಿರುಹೋ
ದರದೊಳಗೊಗೆದಾತನ ಸಿರಿಮೊಗದೊಳು
ಗರುವಿಕೆದಾಳಿ ನೆಱೆದು ಕೈವಲ್ಯಸತಿಗೆ ಸಹಚರಿಯಾಗಿ
ಭರದಿಂ ಭವ್ಯಭುಜಂಗರನವಳೊಳ್
ನೆರಪುವ ಕೋವಿದೆ ನರಸುರವಂದಿತೆ
ತರುಣೀಮಣಿ ಭಾರತಿ ಮನ್ಮತಿಗೀವುದು ಮಾಂಗಲ್ಯವನು
ಯಾರ ಹೃದಯಕಮದಲ್ಲಿ ಜನಿಸಿದಳೋ, ಅಂತಹ ಪರಬ್ರಹ್ಮನ ಸಿರಿಮೊಗದಲ್ಲಿ ಚೆಲುವನ್ನು ತಾಳಿ ಸರಸ್ವತಿಯು ನೆಲಸಿದ್ದಾಳೆ. ಕೈವಲ್ಯಸತಿಗೆ ಸಹಚಾರಿಣಿಯಾಗಿ, ಸಡಗರದಿಂದ ಭವ್ಯಭುಜಂಗರೊಂದಿಗೆ ಸೇರಿಸುವ ನೈಪುಣ್ಯವತಿಯೂ, ನರ ಮತ್ತು ಸುರರಿಂದ ಪೂಜಿಸಲ್ಪಡುವವಳೂ ಆದ ತರುಣೀಮಣಿ ಭಾರತಿ ನೀನು ನಮ್ಮ ಮತಿಗೀವುದು ಮಂಗಳವನು ಎಂಬುದು ಕವಿಯ ಆಶಯ. ಆದರೆ ’ಭುಜಂಗ’ ಎಂಬ ಪದಕ್ಕೆ ವಿಟ, ಜಾರ, ಹಾವು ಮೊದಲಾದ ಅರ್ಥಗಳನ್ನು ಪದಕೋಶದಲ್ಲಿ ಹೇಳಲಾಗಿದೆ. ಆದ್ದರಿಂದ ’ಕೈವಲ್ಯಸತಿಗೆ ಸಹಚರಿಯಾಗಿ ಭರದಿಂ ಭವ್ಯಭುಜಂಗರನವಳೊಳ್’ ಎಂಬ ಮಾತು ಅಪಾರ್ಥಕ್ಕೆ ಎಡೆ ಮಾಡಿಕೊಡುತ್ತದೆ. ’ಸತಿಯೊಡನೆ ಚೆಲ್ಲಾಟ ವಿಟರಿಗೇನೋ ಸ್ವಾಭಾವಿಕ. ಆದರೆ ಕೈವಲ್ಯ ಸತಿಯೊಡನೆ ಭವ್ಯಭುಜಂಗರು ಚೆಲ್ಲಾಟವಾಡಬಹುದೆ? ಹಾಗಾದರೆ ಅವರು ಭವ್ಯರು ಅಂದರೆ ಜಿನಭಕ್ತರು ಹೇಗೆ? ಕೈವಲ್ಯಸತಿ ಹೇಗೆ? ಮತ್ತು ಇವರನ್ನು ನೆರಪುವುದಕ್ಕೆ ತರುಣೀಮಣಿ ಭಾರತಿ ಕೋವಿದೆಯಾಗಿ ಕೆಲಸ ಮಾಡಬೇಕೆ?’ ಎಂಬ ಪ್ರಶ್ನೆಗಳನ್ನು ರಂ.ಶ್ರೀ.ಮುಗಳಿಯವರು ಎತ್ತಿದ್ದಾರೆ. ಭುಜಂಗ ಪದಕ್ಕೆ ಪತಿ, ಒಡೆಯ ಎಂಬ ಅರ್ಥಗಳು ಇರುವುದನ್ನೂ ನಾವು ಗಮನಿಸಬೇಕಾಗಿದೆ. ಇಲ್ಲಿ ಬರುವವರು ಕೇವಲ ಭುಜಂಗರಲ್ಲ; ಭವ್ಯ ಭುಜಂಗರು. ಅಂದರೆ ಜಿನಭಕ್ತರಾದ ಪತಿಗಳು, ಒಡೆಯರು ಎಂದರ್ಥ. ಆದರೂ ’ಭವ್ಯರೆಂಬ ಪತಿಗಳು’ ಎಂಬ ಅರ್ಥ ಬರುವುದರಿಂದ, ’ಒಬ್ಬ ಸತಿಗೆ ಬಹುಪತಿಗಳು ಎಂಬ ವಿಪರೀತಾರ್ಥವಾಗುತ್ತದೆ’ ಎಂಬ ಮುಗಳಿಯವರ ಪ್ರಶ್ನೆ ಹಾಗೇ ಉಳಿಯುತ್ತದೆ. ನಾವು ಅದನ್ನು ಬೇರೊಂದು ರೀತಿಯಲ್ಲಿ ಪರಿಶೀಲಿಸಬಹುದಾಗಿದೆ. ನಾಗಚಂದ್ರನ ’ಕೈವಲ್ಯಬೋಧರಮಾ ಮೌಕ್ತಿಕಹಾರಯಷ್ಟಿ’, ಪಾರ್ಶ್ವಕವಿಯ ’ಅತನುಜಿತಜಿನವದನದಿಂ ನಿರ್ವೃತಿಪಥವ ತೋರಲ್ಕೆತಾಸರಸತಿಯೆನಿಸಿ ಪೊರಮಟ್ಟು ನಿರ್ಮಳರೂಪನಾಂತೀಗ’ ಮತ್ತು ಬಾಹುಬಲಿ ಪಂಡಿತನ ’ಸರಸ್ವತೀ ಕಮಳಿನಿ ತೋರ್ಕೆ ಮುಕ್ತಿಕಮಳಾಮುಖಮಂ ನಮಗೊಲ್ದು ಲೀಲೆಯಿಂ’ ಎಂಬ ಪರಿಕಲ್ಪನೆಗಳನ್ನು ಗಮನಿಸಿದಾಗ, ಸರಸ್ವತಿಯನ್ನು ಮುಕ್ತಿಲಕ್ಷ್ಮಿಗಾಗಿ ಪ್ರಾರ್ಥಿಸುವುದು ಒಂದು ಸಂಪ್ರದಾಯವಾಗಿಯೇ ಬಂದಿರುವುದನ್ನು ಗಮನಿಸಬಹುದು. ಮುಕ್ತಿಸಂಪಾದನೆಗೆ ಸರಸ್ವತಿಯು ನೆರವಾಗುತ್ತಾಳೆ ಎಂಬುದು ಆಶಯ. ಆದ್ದರಿಂದ ಪ್ರಸ್ತುತ ಪದ್ಯದ ವಾಚ್ಯಾರ್ಥವನ್ನು ಮಾತ್ರ ಗಮನಿಸದೆ, ಜಿನಭಕ್ತ(ಭವ್ಯ)ರಾದ ಪತಿಗಳಿಗೆ, ಒಡೆಯರಿಗೆ (ಭುಜಂಗರಿಗೆ) ಮುಕ್ತಿಪದವಿಯನ್ನು ಸೇರುವುದಕ್ಕೆ ನೆರವಾಗುವವಳು ಸರಸ್ವತಿ ಎಂದು ಅರ್ಥೈಸುವುದೇ ಸೂಕ್ತ. ಇವರು ಕೇವಲ ಪತಿಗಳು ಅಥವಾ ಒಡೆಯರು ಮಾತ್ರ ಆಗಿರದೆ ಜಿನಭಕ್ತ(ಭವ್ಯ)ರಾದವರು ಎಂಬುದನ್ನು, ಜಿನಭಕ್ತರಿಗೆ ಮೋಕ್ಷಪದವಿ ಸಿಗುತ್ತದೆ ಎಂಬ ಕಲ್ಪನೆಯನ್ನು ಗಮನಿಸಿ, ಪ್ರಸ್ತುತ ಪದ್ಯದಲ್ಲಿ ಮೇಲ್ನೋಟಕ್ಕೆ ಕಾಣುವ ವಿಪರೀತಾರ್ಥನ್ನು ತೊಡೆದು ಹಾಕಬಹುದಾಗಿದೆ. ಮಂಗರಸ ತನ್ನ ’ನೇಮಿಜಿನೇಶನ ಸಂಗತಿ’ಯಲ್ಲಿ ಸರಸ್ವತಿಯನ್ನು ’ನಿರ್ಮಲನಿಶ್ರೇಯೋಮಾರ್ಗ ನಿಶ್ರೇಣಿ’ ಎಂದು ಕರೆದಿದ್ದಾನೆ.
ವಾಣಿ ವೃಜಿನ ಘನತರಕಾಂತಾರ ಕೃ
ಪಾಣಿ ಸಂಸಾರವಾರಿಧಿಗೆ
ದ್ರೋಣಿ ನಿರ್ಮಮಲನಿಶ್ರೇಯೋಮಾರ್ಗ ನಿ
ಶ್ರೇಣಿಗೆ ನಾನೆರಗುವೆನು
ಕಡಿದಾದ ಕಾಡಿನಂತಿರುವ ಕ್ಲೇಶಗಳಿಗೆ ಕಠಾರಿಯಂತೆ ಇರುವವಳು, ಸಂಸಾರವೆಂಬ ಸಮುದ್ರಕ್ಕೆ ದೋಣಿಯಂತೆ ಇರುವವಳು, ನಿರ್ಮಲವಾದ ಯಶಸ್ಸ(ಮುಕ್ತಿಪದವಿಯ)ನ್ನು ಗಳಿಸಲು ಇರುವ ಮಾರ್ಗಕ್ಕೆ ಏಣಿಯಂತಿರುವವಳು ವಾಗ್ದೇವಿ. ಅವಳಿಗೆ ನಾನು ನಮಸ್ಕರಿಸುತ್ತೇನೆ. ಇಡೀ ಪದ್ಯ ಅಗ್ಗಳನ ’ಚಂದ್ರಪ್ರಭಪುರಾಣಂ’ ಕಾವ್ಯದ ’ದುರಿತವ್ರಾತಲತಾಕೃಪಾಣಿ ವಿಸರದ್ದುರ್ಬೋಧರೋದಸ್ವಿನೀ ತರಣದ್ರೋಣಿ ಸಮುನ್ನತಾಕ್ಷಯಪದ ಪ್ರಾಸಾದ ನಿಶ್ರೇಣಿ’ ಎಂಬ ಪದ್ಯದಿಂದ ಪ್ರಭಾವಿತವಾಗಿದೆ. ’ಸಮ್ಯಕ್ತ್ವ ಕೌಮುದಿ’ಯಲ್ಲಿ ಬಂದಿರುವ ’ವಾಣಿವೀಣಾಪಾಣಿ... ಜಿನಮುಖಜನಿತವಾಣಿ ಶಾಸ್ತ್ರಕ್ಷೆಣಿ ಮಾಣದೆನ್ನೆದೆಯಲಿ ನೆಲಸಿ ಸನ್ಮತಿಯೀವುದು’ ಎಂಬ ಪದ್ಯದ ಮೇಲೂ ’ಚಂದ್ರಪ್ರಭಪುರಾಣಂ’ ಕಾವ್ಯದ ’ದುರಿತವ್ರಾತಲತಾಕೃಪಾಣಿ....’ ಪದ್ಯದ ಪ್ರಭಾವವಿದೆ. ಜಯನೃಪಕಾವ್ಯದ ’ಮುಕ್ತಿಪದವಿಯನ್ನು ಸೇರುವುದಕ್ಕೆ ನೆರವಾಗುವವಳು ಸರಸ್ವತಿ’ ಎಂಬುದಕ್ಕೆ ಪೂರಕವಾಗಿ ’ನಿರ್ಮಲನಿಶ್ರೇಯೋಮಾರ್ಗ ನಿಶ್ರೇಣಿ ಅಂದರೆ ನಿರ್ಮಲವಾದ ಯಶಸ್ಸ(ಮುಕ್ತಿಪದವಿಯ)ನ್ನು ಗಳಿಸಲು ಇರುವ ಮಾರ್ಗಕ್ಕೆ ಏಣಿಯಂತಿರುವವಳು ವಾಗ್ದೇವಿ’ ಎಂಬ ಮಾತು ಬಂದಿದೆ.
ಅಡಿಗೆಯನ್ನು ಕುರಿತ ಕನ್ನಡದ ಮೊದಲ ಸ್ವತಂತ್ರ ಕೃತಿ ’ಸೂಪಶಾಸ್ತ್ರ’ವನ್ನು ಮಂಗರಸನು ರಚಿಸಿದ್ದಾನೆ. ಕೃತಿಯ ಎರಡನೇ ಪದ್ಯದಲ್ಲಿಯೇ ಸೂಪಶಾಸ್ತ್ರಕ್ಕನುಗುಣವಾಗಿ ಸರಸ್ವತಿಯನ್ನು ನೆನೆಯುತ್ತಾನೆ.
ನವ ಕವೀಶ್ವರ ವಿಕಸಿತಾನನ ಘಟಂಗಳೊಳು
ನವರಸವನಿಟ್ಟು ಪರಿಣತೆ ಪ್ರೇಕ್ಷೆ ಮೊದಲಾದ
ವಿವಿಧ ಪರಿಕರಮನೊಡಗಲೆಸಿ ಬಳಿಕವರ ನಾಲಗೆಯೆಂಬ ದರ್ವಿವಿಡಿದು
ತವೆ ಪಾಕಮಂ ಮಾಡಿ ರಸಿಕಜನಸಂತತಿಯ
ಕಿವಿಗೆ ತೀವುವ ಭಾರತೀದೇವಿಯಂ ನೆನೆದು
ಸವಿವಡೆದ ಷಡ್ರಸವಿಪಾಕಭೇದಮನೆನ್ನ ಬಲ್ಲಂದದಿಂ ಪೇಳ್ವೆನು
ಹೊಸ ಕವೀಶ್ವರರ ನಗುವಿನಿಂದ ಬಿರಿದ ಮುಖಗಳೆಂಬ ಪಾತ್ರೆಗಳಲ್ಲಿ ನವರಸಗಳನ್ನು ಹಾಕಿ, ಚಾತುರ್ಯ, ದರ್ಶನ (ಶೋಭೆ) ಮೊದಲಾದ (ಕಾವ್ಯ) ಪರಿಕರಗಳೊಂದಿಗೆ ಕಲೆಸಿ, ಬಳಿಕ ಅವರ (ಹೊಸ ಕವೀಶ್ವರರ) ನಾಲಗೆಯೆಂಬ ಸೌಟಿನಿಂದ ತಿರುಗಿಸುತ್ತಾ, ಒಳ್ಳೆಯ ಅಡುಗೆಯನ್ನು (ಕಾವ್ಯವನ್ನು) ಮಾಡಿ (ಹೇಳಿಸಿ), ರಸಿಕ ಜನರ ಬಾಯಿಗೆ (ಕಿವಿಗೆ) ತುಂಬುವ ಭಾರತಿ(ಸರಸ್ವತಿ)ಯನ್ನು ಸ್ತುತಿಸಿ, ರುಚಿಯಿಂದ, ಷಡ್ರಸಗಳಿಂದ ಕೂಡಿದ ಪಾಕ ವಿಶೇಷಗಳನ್ನು ತಿಳಿದ ಮಟ್ಟಿಗೆ ಹೇಳುತ್ತೇನೆ ಎಂಬುದು ಮಂಗರಸನ ನಿವೇದನೆ. ಸರಸ್ವತಿಯನ್ನು (ಕಾವ್ಯವೆಂಬ) ಪಾಕಶಾಸ್ತ್ರಪ್ರವೀಣೆಯಾಗಿಸಿರುವುದು ಕವಿಯ ಚಮತ್ಕಾರವನ್ನು ತೋರಿಸುತ್ತದೆ. ಜೊತೆಗೆ ಸರಸ್ವತಿಗೆ ಹೊಸತೆರನಾದ ಆದರೆ ವಿಶೇಷವಾದ ಪಾತ್ರವನ್ನೂ ಕಲ್ಪಿಸುತ್ತದೆ.
Monday, August 30, 2010
Saturday, August 21, 2010
ಇವರು ತಪ್ಪಿಸಿಕೊಂಡವರಂತೆ!
ನೆನ್ನೆ ಸಂಜೆ ನಾಲ್ಕರ ಸಮಯದಲ್ಲಿ ಯಾವುದೋ ಕೆಲಸದ ನಿಮಿತ್ತವಾಘಿ ಸ್ನೇಹಿತರೊಂದಿಗೆ, ಮಾಗಡಿ ರಸ್ತೆಯಿಂದ ಯಶವಂತಪುರದ ಕಡೆಗೆ ಆಟೋದಲ್ಲಿ ಹೋಗುತ್ತಿದ್ದೆ. ದಾರಿಯಲ್ಲಿ ಅಲ್ಲಲ್ಲಿ ಕಾಖಿ ಚೆಡ್ಡಿ ಅಂಗಿ ತೊಟ್ಟ ಐದಾರು ಮಂದಿ ದಾರಿಯಲ್ಲಿ ತೂಗಾಡಿಕೊಂಡು ಹೋಗುತ್ತಿದ್ದರು. ಒಂದೆರಡು ಕಡೆ ಒಂದಿಬ್ಬರು ತಿಪ್ಪೆ ಗುಂಡಿ ಕೆದಕುತ್ತಿದ್ದರು. ಅವರೆಲ್ಲಾ ಭಿಕ್ಷುಕರ ಪುನರ್ವಸತಿ ಕೇಂದ್ರದಿಂದ ತಪ್ಪಿಸಿಕೊಂಡು ಬಂದವರು ಎಂಬ ನಮ್ಮ ಮಾತಿಗೆ ಆಟೋ ಡ್ರೈವರ್ ಹೀಗೆ ಹೇಳಿದ. ‘ಸರ್, ಲೋಕದ ಕಣ್ಣಿಗೆ ಅವರು ಅಲ್ಲಿಂದ ತಪ್ಪಿಸಿಕೊಂಡು ಬಂದವರು. ಆದರೆ ಅವರನ್ನು ಅಲ್ಲಿಯವರೇ ಬಟ್ಟು ಕಳುಹಿಸುತ್ತಿದ್ದಾರೆ, ಅಲ್ಲಿ ಸಾಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲಿ ಸಾಯುವ ಬದಲು ಬೇರೆಡೆ ಸಾಯಲಿ ಎಂದು ಸರ್ಕಾರವೇ ಅವರನ್ನು ಅನಧಿಕೃತವಾಗಿ ಬಿಡುಗಡೆ ಮಾಡಿ ತಪ್ಪಿಸಿಕೊಂಡು ಹೋಗುತ್ತಿದ್ದಾರೆ ಎಂದು ಸುದ್ದಿ ಹಬ್ಬಿಸುತ್ತಿದೆ’ ಎಂದ. ನಂತರ ಮಾತನಾಡುತ್ತಾ ಅತ ನೀಡಿದ ಕೆಲವು ಮಾಹಿತಿಗಳು ಗಾಬರಿ ಹುಟ್ಟಿಸುವಂತಿದ್ದವು.
ಸರ್ ಅದೊಂದು ನರಕ. ಬೆಳಿಗ್ಗೆಯಿಂದ ಅಲ್ಲಿ ಭಿಕ್ಷುಕರು ಹೊರಬರುತ್ತಿರುವುದು ಸಾಮಾನ್ಯವಾಗಿದೆ. ಮುಖ್ಯ ಬಾಗಿಲಿನಲ್ಲಿಯೇ ಅವರು ಬರುತ್ತಿದ್ದಾರೆ. ಅವರೇನು ತಪ್ಪಿಸಿಕೊಂಡು ಹೋಗುವವರು ಹೀಗೆ ರಾಜಾರೋಷವಾಗಿ ಮುಖ್ಯ ಬಾಗಿಲಿನಲ್ಲಿ ಹೋಗುತ್ತಯಾರೆಯೇ? ನಂತರ ಅಲ್ಲಿ ಹೊರಗೆ ಬಂದ ತಕ್ಷಣ ಭಿಕ್ಷೆ ಕೇಳುವುದಕ್ಕೆ ಶುರುವಿಟ್ಟುಕೊಂಡರು. ಅಲ್ಲಿನ ನಮ್ಮ ಆಟೋಸಂಘದವರು, ಸ್ವಲ್ಪ ಹಣ ಸೇರಿಸಿ, ಅಕ್ಕಪಕ್ಕದ ಅಂಗಡಿಗಳವರ ಮನವೊಲಿಸಿ, ಎಲ್ಲರಿಗೂ ಬ್ರೆಡ್ಡು ಬಿಸ್ಕೆಟ್ ಕೊಡಿಸಿದೆವು. ನಂತರ ಕೆಲವರು ಅಲ್ಲಿಯೇ ಮಲಗು ಶುರುಮಾಡಿದರೆ, ಇನ್ನು ಕೆಲವರು ಮೆಜೆಸ್ಟಿಕ್ ಕಡೆ ಹೊರಟರು. ಯಾವುದೇ ಸಿಟಿ ಬಸ್ಸಿನವನೂ ದುಡ್ಡು ಕೊಡುತ್ತೇನೆಂದರೂ ಅವರನ್ನು ಹತ್ತಿಸಿಕೊಳ್ಳಲಿಲ್ಲ. ಆಗ ನಾವು ಒಂದಷ್ಟು ಜನ ಸ್ನೇಹಿತರು, ನಮ್ಮ ನಮ್ಮ ಾಟೋಗಳಲ್ಲಿ ನಾಲ್ಕೈದು ಜನರನ್ನು ಕೂರಿಸಿಕೊಂಡು ಮೆಜೆಸ್ಟಿಕ್ ತಲುಪಿಸಿದೆವು. ಹೀಗೆ ನಾನು ನಾಲ್ಕು ಟ್ರಿಪ್ ಅವರನ್ನು ಉಚಿತವಾಗಿ ಸಾಗಿಸಿ, ಇನ್ನಾದರೂ ಮನೆಗೆ ಹೋಗಬೇಕೆಂದು ಹೋಗುತ್ತಿದ್ದೆ. ಇಂದು ಬೆಳಿಗ್ಗೆಯಿಂದ ನನಗೆ ಐವತ್ತು ರೂಪಾಯಿಕೂಡಾ ಆಗಿರಲಿಲ್ಲ. ಮನೆಯಲ್ಲಿ ಹಬ್ಬ. ಅದಕ್ಕೆ ನೀವು ಯಶವಂತಪುರಕ್ಕೆ ಕರೆದಾಗ ತಡವಾಗಿದ್ದರೂ ನಾನು ಬರಲೊಪ್ಪಿದೆ. ಆದರೂ ಹಬ್ಬದ ದಿನ ನಾವು ಇಷ್ಟು ನಮ್ಮ ಕೈಲಾದ ಸೇವೆಯನ್ನು ಮಾಡಿದೆವೆಂಬ ತೃಪ್ತಿ ನಮಗಿದೆ ಎಂದ.
ಅಷ್ಟರಲ್ಲಿ ಯಶವಂತಪುರದ ಮಾರ್ಗದಲ್ಲಿ ಇನ್ನೂ ಹತ್ತಾರು ಜನ ಭಿಕ್ಷುಕರು ನಡೆದುಕೊಂಡು ಹೋಗುವುದನ್ನು ನಮಗೆ ಆತ ತೋರಿಸಿದ. ನಂತರ ಆತ ಹೇಳಿದ (ಕೆಲವು ಭಿಕ್ಷುಕರು ಅವನಿಗೆ ನೀಡಿದ್ದ ಮಾಹಿತಿಗಳು) ಕೆಲವು ವಿಚಾರಗಳು ಹೀಗಿವೆ.
ಅಲ್ಲಿಯೇ ಆಡಳಿತದವರೇ ಕೆಲವು ಆಯ್ದ ಭಿಕ್ಷುಕರನ್ನು ಬೆಳಿಗ್ಗೆ ಹೊರಕ್ಕೆ ಬಿಡುವುದು. ಸಂಜೆ ಅವರನ್ನು ಎತ್ತಿಕೊಂಡು ಬರುವುದು. ಬೆಳಿಗ್ಗೆಯಿಂದ ಅವರು ಭಿಕ್ಷೆ ಎತ್ತಿ ಸಂಪಾದಿಸಿದ್ದ ಹಣವನ್ನು ಅಲ್ಲಿನ ಜವಾನರು ಆಯಾಗಳು, ಸೆಕ್ಯೂರಿಟಿ ಗಾರ್ಡ್ಸ ಅಧಿಕಾರಿಗಳು ಕಿತ್ತುಕೊಂಡು ಹಂಚಿಕೊಳ್ಳುತ್ತಿದ್ದರಂತೆ.
ಅಲ್ಲಿ ಅಶಕ್ತ ಭಿಕ್ಷುಕರನ್ನು ನೋಡಿಕೊಳ್ಳಲು ಆಯಾಗಳನ್ನು ನೇಮಿಸಲಾಗಿದೆಯಂತೆ. ಆದರೆ ಅವರೆಷ್ಟು ಕ್ರೂರಿಗಳೆಂದರೆ, ಹತ್ತು ಇಪ್ಪತ್ತು ಜನರನ್ನು ಒಟ್ಟಿಗೆ ಕೂರಿಸಿ ಬಕೆಟ್ಟಿನಿಂದ ನೀರನ್ನು ಎರಚಿ, ಸ್ನಾನವಾಯಿತು ಎಂದು ಕಳುಹಿಸುತ್ತಿದ್ದರಂತೆ. ಸಾವಿರಾರು ಟವೆಲ್ ಪಂಚೆ ಮುಂತಾದವುಗಳನ್ನು ಖರೀದಿಸುತ್ತಿದ್ದರೂ ಒಂದನ್ನೂ ಭಿಕ್ಷುಕರ ಕೈಗೆ ಕೊಡುತ್ತಿರಲಿಲ್ಲವಂತೆ. ಸ್ನಾ ಮಾಡಿಸುವಾಗ ಮಾಡಿಸಿದ ನಂತರ ಬಟ್ಟೆ ಬಸಲಾಯಿಸುವ ಕೆಲಸವೇ ಇಲ್ಲ. ಬೆಟ್ಟೆ ಹಾಕಿಕೊಂಡೇ ಸ್ನಾನ, ಆ ಬಟ್ಟೆಗಳು ಒಣಗುವುದು ಮೈಮೇಲೆಯೇ ಅಂತೆ!.
ಯಾರಾದರೂ ಹೊರಗಿನವರು ಬಂದರೆ, ಅವರೆದುರು ಏನೂ ಮಾತನಾಡದಂತೆ ಹೆದರಿಸುತ್ತಿದ್ದರಂತೆ. ಹೊಡೆಯವುದು ಬಡಿಯುವುದು ಸಾಮಾನ್ಯ ಸಂಗತಿ. ಒಂದು ರೂಮಿನಲ್ಲಿ ಇಪ್ಪತ್ತು ಮೂವತ್ತು ಜನರನ್ನು ಕೂಡಿ ಹಾಕಿ ರಾಥ್ರಿಯೆಲ್ಲಾ ಅಲ್ಲಿಯೇ ಮಲಗಿಸುತ್ತತಿದ್ದರಂತೆ. ಕುಳಿತಲ್ಲಿಯೇ ಒಂದ ಎರಡ ಎಲ್ಲಾ. ಸ್ವಲ್ಪ ಓದು ಬರಹ ಬರುವ, ಪ್ರತಿಭಟನಾ (ಪುನರ್ವಸತಿ ಕೇಂದ್ರದವರ ಮೇಲೆ ರೇಗುವ, ದೈಹಿಕ ಹಲ್ಲೆಗೆ ಮುಂದಾಗುವ) ಮನೋಭಾವದ ಭಿಕ್ಷುಕರೂ ಅಲ್ಲಿದ್ದರಂತೆ. ಅವರನ್ನು ಕಂಡರಂತೂ ಆಯಾಗಳಿಗೂ ಅಧಿಕಾರಿಗಳಿಗೂ ಕೆಂಡಾಮಂಡಲ ಕೋಪ. ಅವರನ್ನಂತೂ ನಾಯಿಗಳಿಗಿಂತ ಕಡೆಯಾಗಿ ನೋಡುತ್ತಿದ್ದರಂತೆ.
ಕೊನೆಗೆ ಆಟೋಡ್ರೈವರ್ ಹೇಳಿದ್ದು.
ಸರ್ ಅವರ ಪಾಡಿಗೆ ಅವರನ್ನು ಬಿಟ್ಟು ಬಿಡಬಹುದಿತ್ತು. ಅವರನ್ನು ಉದ್ಧಾರ ಮಾಡುವುದಾಗಿ ತಂದು ಇಲ್ಲಿ ಕೂಡಿ ಹಾಕುವುದು ಯಾವ ನ್ಯಾಯ. ಈಗ ಅಲ್ಲಿ ಸಾಯುತ್ತಿರುವವ ಸಂಕ್ಯೆ ಹೆಚ್ಚಾಗಿ ಟೀ.ವಿ.ಪೇಪರಿನಲ್ಲಿ ಸುದ್ದಿ ಬರಲು ಶುರುವಾದಾಗ, ಅವರು ತಪ್ಪಿಸಿಕೊಂಡು ಹೋಗುತ್ತಿದ್ದಾರೆ ಎಂದು ನಾಟಕ ಆಡುವುದೇಕೆ? ಈಗ ಇವರೆಲ್ಲ ಮತ್ತೆ ಜನಗಳ ಮಧ್ಯೆ ಬಂದು ಸಾಂಕ್ರಾಮಿಕ ರೋಗಗಳು ಹರಡುವುದಿಲ್ಲವೇ? ಸರ್ಕಾರಕ್ಕೆ ಮಾನವೀಯತೆಯೇ ಇಲ್ಲ. ಎಲ್ಲಾ ಕೆಲಸವನ್ನೂ ನಾನೇ ಮಾಡುತ್ತೇನೆಂದು ಹೊರಟು, ತಿನ್ನುವವರಿಗೆ ದಾರಿ ಮಾಡಿಕೊಡುತ್ತದೆ ಎಂದ.
ಆಗ ನನ್ನ ಜೊತೆ ಬರುತ್ತಿದ್ದ ನನ್ನ ಸ್ನೇಹಿತರು, ಇನ್ನ ರಸ್ತೆಯಲ್ಲಿ ಅನಾಥ ಹೆಣಗಳು ಸಂಖ್ಯೆ ಹೆಚ್ಚಾಗುತ್ತದೆ. ಸರ್ಕಾರಕ್ಕೆ, ಅವರು ಅಲ್ಲಿ ಸಾಯುವ ಬದಲು ಹೊರಗೆಲ್ಲಾದರೂ ಸತ್ತರೆ ಅಷ್ಟು ಸುದ್ದಿಯಾಗುವುದಿಲ್ಲ ಎಂದೂ ಗೊತ್ತಿದೆ. ಅದಕ್ಕೆ ಈಗ ತಪ್ಪಿಸಿಕೊಂಡು ಹೋದರು ಎಂಬ ಸುದ್ದಿ ಹಬ್ಬಿಸಿ ಬಿಟ್ಟು ಓಡಿಸುತ್ತಿದ್ದಾರೆ ಎಂದರು.
‘ಎಲ್ಲಾ ಕೆಲಸವನ್ನೂ ನಾನೇ ಮಾಡುತ್ತೇನೆಂದು ಹೊರಟು, ತಿನ್ನುವವರಿಗೆ ದಾರಿ ಮಾಡಿಕೊಡುತ್ತದೆ’ ಎಂದ ಆಟೋ ಡ್ರೈವರನ ಮಾತುಗಳಲ್ಲಿರುವ ಸತ್ಯವನ್ನು ಕುರಿತು ಯೋಚಿಸುತ್ತಿದ್ದೆ. ನಮ್ಮಂತೆ ಅನ್ನ ತಿನ್ನುವ ಕಕ್ಕ ಮಾಡುವ ಓಡಾಡುವ ಮಾತನಾಡುವ ಸಂದರ್ಭ ಬಂದರೆ ಸಾಕ್ಷಿ ನುಡಿಯುವ ಶಕ್ತಿಯಿರುವ ಸಹವಾಸಿ ಮನುಷ್ಯರ ವಿಚಾರದಲ್ಲಿಯೇ ಸರ್ಕಾರಿ ವ್ಯವಸ್ಥೆ ಈ ರೀತಿಯಾಗಿ ನಡೆದುಕೊಂಡಿದೆ. ಇನ್ನು ಮುದಿ ಗೋವುಗಳನ್ನೂ ನಾನೇ ಸಾಕುತ್ತೇನೆ ಎಂದು ಹೊರಟಿರುವ ಈ ವ್ಯವಸ್ಥೆ, ಆ ಮೂಕ ಪ್ರಾಣಿಗಳನ್ನು ಇನ್ನೆಷ್ಟು ಚೆನ್ನಾಗಿ ನೋಡಿಕೊಳ್ಳಬಹುದು. ಈಗ ಸಾವಿರಾರು ಸಂಖ್ಯೆಯ (ಯೂನಿಫಾರ್ಮ್ ಧರಿಸಿರುವ) ಭಿಕ್ಷುಕರು ರಸ್ತೆಯಲ್ಲಿ ಕುಂಟುತ್ತಾ, ಕಾಲೆಳೆಯುತ್ತಾ ಹೋಗುವುದನ್ನು ನೋಡಬೇಕಾಗಿರುವಂತೆ, ಮುಂದೆ ಇನ್ನೇನನ್ನು ನೋಡಬೇಕೋ ತಿಳಿಯುತ್ತಿಲ್ಲ.
ಕೊಸರು: ಬೆಳಿಗ್ಗೆ ವಾರ್ತೆಯಲ್ಲಿ, ಅಲ್ಲಿನ ಅಧಿಕಾರಿಯೊಬ್ಬರನ್ನು ಕೆಲಸದಿಂದ ವಜಾ ಮಾಡಿದ, ಹಾಗೂ ಸಚಿವರೊಬ್ಬರನ್ನು ಸಂಬಂಧಪಟ್ಟ ಖಾತೆಯಿಂದ ಕಿತ್ತುಕೊಂಡು, ಬೇರೆ ಖಾತೆಗೆ ನಿಯುಕ್ತಗೊಳಿಸಿದ್ದನ್ನು ಪ್ರಸಾರ ಮಾಡುತ್ತಿದ್ದರು.
ಹಾಗೆ ವಜಾ ಮಾಡುವುದರಿಂದ, ಖಾತೆ ಬದಲಾಯಿಸುವುದರಿಂದ ಆಗಿರುವ ತಪ್ಪು ಸರಿಹೋಗುತ್ತದೆಯೇ? ಮುಖ್ಯಮಂತ್ರಿಗಳೇ ಯೋಚಿಸಬೇಕು
ಸರ್ ಅದೊಂದು ನರಕ. ಬೆಳಿಗ್ಗೆಯಿಂದ ಅಲ್ಲಿ ಭಿಕ್ಷುಕರು ಹೊರಬರುತ್ತಿರುವುದು ಸಾಮಾನ್ಯವಾಗಿದೆ. ಮುಖ್ಯ ಬಾಗಿಲಿನಲ್ಲಿಯೇ ಅವರು ಬರುತ್ತಿದ್ದಾರೆ. ಅವರೇನು ತಪ್ಪಿಸಿಕೊಂಡು ಹೋಗುವವರು ಹೀಗೆ ರಾಜಾರೋಷವಾಗಿ ಮುಖ್ಯ ಬಾಗಿಲಿನಲ್ಲಿ ಹೋಗುತ್ತಯಾರೆಯೇ? ನಂತರ ಅಲ್ಲಿ ಹೊರಗೆ ಬಂದ ತಕ್ಷಣ ಭಿಕ್ಷೆ ಕೇಳುವುದಕ್ಕೆ ಶುರುವಿಟ್ಟುಕೊಂಡರು. ಅಲ್ಲಿನ ನಮ್ಮ ಆಟೋಸಂಘದವರು, ಸ್ವಲ್ಪ ಹಣ ಸೇರಿಸಿ, ಅಕ್ಕಪಕ್ಕದ ಅಂಗಡಿಗಳವರ ಮನವೊಲಿಸಿ, ಎಲ್ಲರಿಗೂ ಬ್ರೆಡ್ಡು ಬಿಸ್ಕೆಟ್ ಕೊಡಿಸಿದೆವು. ನಂತರ ಕೆಲವರು ಅಲ್ಲಿಯೇ ಮಲಗು ಶುರುಮಾಡಿದರೆ, ಇನ್ನು ಕೆಲವರು ಮೆಜೆಸ್ಟಿಕ್ ಕಡೆ ಹೊರಟರು. ಯಾವುದೇ ಸಿಟಿ ಬಸ್ಸಿನವನೂ ದುಡ್ಡು ಕೊಡುತ್ತೇನೆಂದರೂ ಅವರನ್ನು ಹತ್ತಿಸಿಕೊಳ್ಳಲಿಲ್ಲ. ಆಗ ನಾವು ಒಂದಷ್ಟು ಜನ ಸ್ನೇಹಿತರು, ನಮ್ಮ ನಮ್ಮ ಾಟೋಗಳಲ್ಲಿ ನಾಲ್ಕೈದು ಜನರನ್ನು ಕೂರಿಸಿಕೊಂಡು ಮೆಜೆಸ್ಟಿಕ್ ತಲುಪಿಸಿದೆವು. ಹೀಗೆ ನಾನು ನಾಲ್ಕು ಟ್ರಿಪ್ ಅವರನ್ನು ಉಚಿತವಾಗಿ ಸಾಗಿಸಿ, ಇನ್ನಾದರೂ ಮನೆಗೆ ಹೋಗಬೇಕೆಂದು ಹೋಗುತ್ತಿದ್ದೆ. ಇಂದು ಬೆಳಿಗ್ಗೆಯಿಂದ ನನಗೆ ಐವತ್ತು ರೂಪಾಯಿಕೂಡಾ ಆಗಿರಲಿಲ್ಲ. ಮನೆಯಲ್ಲಿ ಹಬ್ಬ. ಅದಕ್ಕೆ ನೀವು ಯಶವಂತಪುರಕ್ಕೆ ಕರೆದಾಗ ತಡವಾಗಿದ್ದರೂ ನಾನು ಬರಲೊಪ್ಪಿದೆ. ಆದರೂ ಹಬ್ಬದ ದಿನ ನಾವು ಇಷ್ಟು ನಮ್ಮ ಕೈಲಾದ ಸೇವೆಯನ್ನು ಮಾಡಿದೆವೆಂಬ ತೃಪ್ತಿ ನಮಗಿದೆ ಎಂದ.
ಅಷ್ಟರಲ್ಲಿ ಯಶವಂತಪುರದ ಮಾರ್ಗದಲ್ಲಿ ಇನ್ನೂ ಹತ್ತಾರು ಜನ ಭಿಕ್ಷುಕರು ನಡೆದುಕೊಂಡು ಹೋಗುವುದನ್ನು ನಮಗೆ ಆತ ತೋರಿಸಿದ. ನಂತರ ಆತ ಹೇಳಿದ (ಕೆಲವು ಭಿಕ್ಷುಕರು ಅವನಿಗೆ ನೀಡಿದ್ದ ಮಾಹಿತಿಗಳು) ಕೆಲವು ವಿಚಾರಗಳು ಹೀಗಿವೆ.
ಅಲ್ಲಿಯೇ ಆಡಳಿತದವರೇ ಕೆಲವು ಆಯ್ದ ಭಿಕ್ಷುಕರನ್ನು ಬೆಳಿಗ್ಗೆ ಹೊರಕ್ಕೆ ಬಿಡುವುದು. ಸಂಜೆ ಅವರನ್ನು ಎತ್ತಿಕೊಂಡು ಬರುವುದು. ಬೆಳಿಗ್ಗೆಯಿಂದ ಅವರು ಭಿಕ್ಷೆ ಎತ್ತಿ ಸಂಪಾದಿಸಿದ್ದ ಹಣವನ್ನು ಅಲ್ಲಿನ ಜವಾನರು ಆಯಾಗಳು, ಸೆಕ್ಯೂರಿಟಿ ಗಾರ್ಡ್ಸ ಅಧಿಕಾರಿಗಳು ಕಿತ್ತುಕೊಂಡು ಹಂಚಿಕೊಳ್ಳುತ್ತಿದ್ದರಂತೆ.
ಅಲ್ಲಿ ಅಶಕ್ತ ಭಿಕ್ಷುಕರನ್ನು ನೋಡಿಕೊಳ್ಳಲು ಆಯಾಗಳನ್ನು ನೇಮಿಸಲಾಗಿದೆಯಂತೆ. ಆದರೆ ಅವರೆಷ್ಟು ಕ್ರೂರಿಗಳೆಂದರೆ, ಹತ್ತು ಇಪ್ಪತ್ತು ಜನರನ್ನು ಒಟ್ಟಿಗೆ ಕೂರಿಸಿ ಬಕೆಟ್ಟಿನಿಂದ ನೀರನ್ನು ಎರಚಿ, ಸ್ನಾನವಾಯಿತು ಎಂದು ಕಳುಹಿಸುತ್ತಿದ್ದರಂತೆ. ಸಾವಿರಾರು ಟವೆಲ್ ಪಂಚೆ ಮುಂತಾದವುಗಳನ್ನು ಖರೀದಿಸುತ್ತಿದ್ದರೂ ಒಂದನ್ನೂ ಭಿಕ್ಷುಕರ ಕೈಗೆ ಕೊಡುತ್ತಿರಲಿಲ್ಲವಂತೆ. ಸ್ನಾ ಮಾಡಿಸುವಾಗ ಮಾಡಿಸಿದ ನಂತರ ಬಟ್ಟೆ ಬಸಲಾಯಿಸುವ ಕೆಲಸವೇ ಇಲ್ಲ. ಬೆಟ್ಟೆ ಹಾಕಿಕೊಂಡೇ ಸ್ನಾನ, ಆ ಬಟ್ಟೆಗಳು ಒಣಗುವುದು ಮೈಮೇಲೆಯೇ ಅಂತೆ!.
ಯಾರಾದರೂ ಹೊರಗಿನವರು ಬಂದರೆ, ಅವರೆದುರು ಏನೂ ಮಾತನಾಡದಂತೆ ಹೆದರಿಸುತ್ತಿದ್ದರಂತೆ. ಹೊಡೆಯವುದು ಬಡಿಯುವುದು ಸಾಮಾನ್ಯ ಸಂಗತಿ. ಒಂದು ರೂಮಿನಲ್ಲಿ ಇಪ್ಪತ್ತು ಮೂವತ್ತು ಜನರನ್ನು ಕೂಡಿ ಹಾಕಿ ರಾಥ್ರಿಯೆಲ್ಲಾ ಅಲ್ಲಿಯೇ ಮಲಗಿಸುತ್ತತಿದ್ದರಂತೆ. ಕುಳಿತಲ್ಲಿಯೇ ಒಂದ ಎರಡ ಎಲ್ಲಾ. ಸ್ವಲ್ಪ ಓದು ಬರಹ ಬರುವ, ಪ್ರತಿಭಟನಾ (ಪುನರ್ವಸತಿ ಕೇಂದ್ರದವರ ಮೇಲೆ ರೇಗುವ, ದೈಹಿಕ ಹಲ್ಲೆಗೆ ಮುಂದಾಗುವ) ಮನೋಭಾವದ ಭಿಕ್ಷುಕರೂ ಅಲ್ಲಿದ್ದರಂತೆ. ಅವರನ್ನು ಕಂಡರಂತೂ ಆಯಾಗಳಿಗೂ ಅಧಿಕಾರಿಗಳಿಗೂ ಕೆಂಡಾಮಂಡಲ ಕೋಪ. ಅವರನ್ನಂತೂ ನಾಯಿಗಳಿಗಿಂತ ಕಡೆಯಾಗಿ ನೋಡುತ್ತಿದ್ದರಂತೆ.
ಕೊನೆಗೆ ಆಟೋಡ್ರೈವರ್ ಹೇಳಿದ್ದು.
ಸರ್ ಅವರ ಪಾಡಿಗೆ ಅವರನ್ನು ಬಿಟ್ಟು ಬಿಡಬಹುದಿತ್ತು. ಅವರನ್ನು ಉದ್ಧಾರ ಮಾಡುವುದಾಗಿ ತಂದು ಇಲ್ಲಿ ಕೂಡಿ ಹಾಕುವುದು ಯಾವ ನ್ಯಾಯ. ಈಗ ಅಲ್ಲಿ ಸಾಯುತ್ತಿರುವವ ಸಂಕ್ಯೆ ಹೆಚ್ಚಾಗಿ ಟೀ.ವಿ.ಪೇಪರಿನಲ್ಲಿ ಸುದ್ದಿ ಬರಲು ಶುರುವಾದಾಗ, ಅವರು ತಪ್ಪಿಸಿಕೊಂಡು ಹೋಗುತ್ತಿದ್ದಾರೆ ಎಂದು ನಾಟಕ ಆಡುವುದೇಕೆ? ಈಗ ಇವರೆಲ್ಲ ಮತ್ತೆ ಜನಗಳ ಮಧ್ಯೆ ಬಂದು ಸಾಂಕ್ರಾಮಿಕ ರೋಗಗಳು ಹರಡುವುದಿಲ್ಲವೇ? ಸರ್ಕಾರಕ್ಕೆ ಮಾನವೀಯತೆಯೇ ಇಲ್ಲ. ಎಲ್ಲಾ ಕೆಲಸವನ್ನೂ ನಾನೇ ಮಾಡುತ್ತೇನೆಂದು ಹೊರಟು, ತಿನ್ನುವವರಿಗೆ ದಾರಿ ಮಾಡಿಕೊಡುತ್ತದೆ ಎಂದ.
ಆಗ ನನ್ನ ಜೊತೆ ಬರುತ್ತಿದ್ದ ನನ್ನ ಸ್ನೇಹಿತರು, ಇನ್ನ ರಸ್ತೆಯಲ್ಲಿ ಅನಾಥ ಹೆಣಗಳು ಸಂಖ್ಯೆ ಹೆಚ್ಚಾಗುತ್ತದೆ. ಸರ್ಕಾರಕ್ಕೆ, ಅವರು ಅಲ್ಲಿ ಸಾಯುವ ಬದಲು ಹೊರಗೆಲ್ಲಾದರೂ ಸತ್ತರೆ ಅಷ್ಟು ಸುದ್ದಿಯಾಗುವುದಿಲ್ಲ ಎಂದೂ ಗೊತ್ತಿದೆ. ಅದಕ್ಕೆ ಈಗ ತಪ್ಪಿಸಿಕೊಂಡು ಹೋದರು ಎಂಬ ಸುದ್ದಿ ಹಬ್ಬಿಸಿ ಬಿಟ್ಟು ಓಡಿಸುತ್ತಿದ್ದಾರೆ ಎಂದರು.
‘ಎಲ್ಲಾ ಕೆಲಸವನ್ನೂ ನಾನೇ ಮಾಡುತ್ತೇನೆಂದು ಹೊರಟು, ತಿನ್ನುವವರಿಗೆ ದಾರಿ ಮಾಡಿಕೊಡುತ್ತದೆ’ ಎಂದ ಆಟೋ ಡ್ರೈವರನ ಮಾತುಗಳಲ್ಲಿರುವ ಸತ್ಯವನ್ನು ಕುರಿತು ಯೋಚಿಸುತ್ತಿದ್ದೆ. ನಮ್ಮಂತೆ ಅನ್ನ ತಿನ್ನುವ ಕಕ್ಕ ಮಾಡುವ ಓಡಾಡುವ ಮಾತನಾಡುವ ಸಂದರ್ಭ ಬಂದರೆ ಸಾಕ್ಷಿ ನುಡಿಯುವ ಶಕ್ತಿಯಿರುವ ಸಹವಾಸಿ ಮನುಷ್ಯರ ವಿಚಾರದಲ್ಲಿಯೇ ಸರ್ಕಾರಿ ವ್ಯವಸ್ಥೆ ಈ ರೀತಿಯಾಗಿ ನಡೆದುಕೊಂಡಿದೆ. ಇನ್ನು ಮುದಿ ಗೋವುಗಳನ್ನೂ ನಾನೇ ಸಾಕುತ್ತೇನೆ ಎಂದು ಹೊರಟಿರುವ ಈ ವ್ಯವಸ್ಥೆ, ಆ ಮೂಕ ಪ್ರಾಣಿಗಳನ್ನು ಇನ್ನೆಷ್ಟು ಚೆನ್ನಾಗಿ ನೋಡಿಕೊಳ್ಳಬಹುದು. ಈಗ ಸಾವಿರಾರು ಸಂಖ್ಯೆಯ (ಯೂನಿಫಾರ್ಮ್ ಧರಿಸಿರುವ) ಭಿಕ್ಷುಕರು ರಸ್ತೆಯಲ್ಲಿ ಕುಂಟುತ್ತಾ, ಕಾಲೆಳೆಯುತ್ತಾ ಹೋಗುವುದನ್ನು ನೋಡಬೇಕಾಗಿರುವಂತೆ, ಮುಂದೆ ಇನ್ನೇನನ್ನು ನೋಡಬೇಕೋ ತಿಳಿಯುತ್ತಿಲ್ಲ.
ಕೊಸರು: ಬೆಳಿಗ್ಗೆ ವಾರ್ತೆಯಲ್ಲಿ, ಅಲ್ಲಿನ ಅಧಿಕಾರಿಯೊಬ್ಬರನ್ನು ಕೆಲಸದಿಂದ ವಜಾ ಮಾಡಿದ, ಹಾಗೂ ಸಚಿವರೊಬ್ಬರನ್ನು ಸಂಬಂಧಪಟ್ಟ ಖಾತೆಯಿಂದ ಕಿತ್ತುಕೊಂಡು, ಬೇರೆ ಖಾತೆಗೆ ನಿಯುಕ್ತಗೊಳಿಸಿದ್ದನ್ನು ಪ್ರಸಾರ ಮಾಡುತ್ತಿದ್ದರು.
ಹಾಗೆ ವಜಾ ಮಾಡುವುದರಿಂದ, ಖಾತೆ ಬದಲಾಯಿಸುವುದರಿಂದ ಆಗಿರುವ ತಪ್ಪು ಸರಿಹೋಗುತ್ತದೆಯೇ? ಮುಖ್ಯಮಂತ್ರಿಗಳೇ ಯೋಚಿಸಬೇಕು
Monday, August 16, 2010
೨೪೦ ನಿಮಿಷಗಳಲ್ಲಿ ೬೮ ಅಭ್ಯರ್ಥಿಗಳಿಗೆ ಸಂದರ್ಶನ; ತುಮಕೂರು ವಿವಿ ವಿಶ್ವದಾಖಲೆ!!!
ಮೊನ್ನೆ ಶುಕ್ರವಾರ ತುಮಕೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಅಸಿಸ್ಟೆಂಟ್ ಪ್ರೊಫೆಸರ್ (ಲೆಕ್ಚರರ್ ಎಂಬುದರ ಹೊಸ ಅವತಾರ!) ಹುದ್ದೆಗೆ ಸಂದರ್ಶನ ನಡೆಯಿತು. ಹಿಂದೊಮ್ಮೆ ಇದೇ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆದು ಅದು ಕೋರ್ಟ್ ಮೆಟ್ಟಿಲು ಹತ್ತಿತ್ತು. ಕೋರ್ಟ್ ಎಲ್ಲವನ್ನೂ ಹೊಸದಾಗಿ ನಡೆಸುವಂತೆ ತೀರ್ಪು ಇತ್ತುದರಿಂದ ನನಗೂ ಸಂದರ್ಶನದ ಅವಕಾಶ ಸಿಕ್ಕಿತ್ತು. ಎಸ್.ಎಂ.ಎಸ್., ಈ ಮೇಲ್ ಹಾಗೂ ಅಂಚೆ ಮುಖಾಂತರವೂ ಸಂದರ್ಶನದ ಬಗ್ಗೆ ಮಾಹಿತಿ ನೀಡಲಾಗಿತ್ತು. ಇದೆಲ್ಲವೂ ಕೋರ್ಟ್ ತೀರ್ಪಿನ ಪ್ರಭಾವವಿದ್ದಿರಬೇಕು.
ಇದೇ ಮೊದಲ ಬಾರಿಗೆ ಕನ್ನಡ ಉಪನ್ಯಾಸಕ ಹುದ್ದೆಯೊಂದಕ್ಕೆ, ವಿವಿಯ ಮಟ್ಟದಲ್ಲಿ ಸಂದರ್ಶನಕ್ಕೆ ಹೊರಟಿದ್ದ ನಾನು ನನ್ನ ಎಲ್ಲಾ ದಾಖಲೆಗಳನ್ನು, ಪ್ರಕಟಣೆಗಳನ್ನು ಹೊತ್ತು, ನನ್ನಂತೆಯೇ ಸಂದರ್ಶನಕ್ಕೆ ಹೊರಟಿದ್ದ ನನ್ನ ಮಿತ್ರರೊಬ್ಬರ ಜೊತೆಗೆ, ಬೆಳಿಗ್ಗೆ ೭.೪೦ ಗಂಟೆಗೆ ತುಮಕೂರು ತಲುಪಿದ್ದೆ. ಅಂದ ಹಾಗೆ ಸಂದರ್ಶನದ ಸಮಯ ನಿಗದಿಯಾಗಿದ್ದು ಬೆಳಿಗ್ಗೆ ೭.೩೦ ಗಂಟೆಗೆ! ನಾವು ಅಲ್ಲಿಗೆ ಹೋಗುವಷ್ಟರಲ್ಲಿ ಸುಮಾರು ಎಪ್ಪತ್ತು ಎಂಬತ್ತು ಜನ ಅಲ್ಲಿ ಜಮಾಯಿಸಿದ್ದರು. ನಾಲ್ಕೈದು ಪರಿಚಿತ ಮುಖಗಳೂ ಇದ್ದವು. ನನ್ನ ಸಹದ್ಯೋಗಿಯೊಬ್ಬರೂ ಸಂದರ್ಶನಕ್ಕೆ ಬಂದಿದ್ದರು. ಒಂದೆರಡು ದಿನಗಳ ಮುಂಚೆಯಷ್ಟೇ ಸಂದರ್ಶನದ ಮಾಹಿತಿ ಸಿಕ್ಕಿದ್ದರಿಂದ ನಮಗೆ ಪರಸ್ಪರ ಗೊತ್ತೇ ಆಗಿರಲಿಲ್ಲ.
ಗದ್ದಲವೋ ಗದ್ದಲ. ಒಂದು ಮೂಲೆಯಲ್ಲಿ ಅಭ್ಯರ್ಥಿಗಳ ಕಾಗದ ಪತ್ರ ಅಂಕಪಟ್ಟಿ ಪುಸ್ತಕ ಲೇಖನ ಮೊದಲಾದವುಗಳನ್ನು ಪರಿಶೀಲಿಸಲಾಗುತ್ತಿತ್ತು. ಒಬ್ಬೊಬ್ಬರದಕ್ಕೆ ಕನಿಷ್ಠ ೧೦ ನಿಮಿಷಗಳಾದರೂ ಬೇಕಾಗುತ್ತಿತ್ತು. ಅಷ್ಟರಲ್ಲೇ ನಾಲ್ಕೈದು ಜನರ ಸಂದರ್ಶನವೂ ಮುಗಿದು ಹೋಗಿತ್ತು!
ಸಂದರ್ಶನ ನಡೆಸುವವರ ವೇಗಕ್ಕೆ ಅನುಗುಣವಾಗಿ ದಾಖಲೆಗಳ ಪರಿಶೀಲನೆ ನಡೆಯುತ್ತಿರಲಿಲ್ಲ. ಅದನ್ನು ತಿಳಿದ ವಿ.ಸಿ.ಯವರು ಸ್ವತಃ ಸಂದರ್ಶನದ ಕೊಠಡಿಯಿಂದ ಬಂದು, ಇನ್ನಿಬ್ಬರನ್ನು ಆ ಕೆಲಸಕ್ಕೆ ನೇಮಿಸಿ ಬೇಗ ಬೇಗ ಪರಿಶೀಲನೆ ನಡೆಸುವಂತೆ ಆಜ್ಞೆಯಿತ್ತು ಮತ್ತೆ ಒಳ ಹೋದರು. ಕೇವಲ ಎರಡು ನಿಮಿಷಗಳಲ್ಲಿ ಒಬ್ಬ ಅಭ್ಯರ್ಥಿಯ ಸಂದರ್ಶನ ಮುಗಿದು ಹೋಗುತ್ತಿತ್ತು!
ಎಂಟೂವರೆಯ ಹೊತ್ತಿಗೆ ನನ್ನ ಜೊತೆಯಲ್ಲಿ ಬಂದಿದ್ದ ಸ್ನೇಹಿತರ ಸಂದರ್ಶನ ಮುಗಿದು ಹೋಯಿತು. ’ಇದೇನು ಸದರ್ಶನವೋ? ನಾಟಕವೋ?’ ಎನ್ನುತ್ತಲೇ ಹೊರ ಬಂದರು. ನಾನು ಸಮಯ ನೋಡಿಕೊಂಡಿದ್ದೆ. ಸರಿಯಾಗಿ ಒಂದೂಮುಕ್ಕಾಲು ನಿಮಿಷದಲ್ಲಿ ಅವರು ಹೊರಗೆ ಬಂದಿದ್ದರು! ಒಳ ಹೋದ ತಕ್ಷಣ ಕುರ್ಚಿಯಲ್ಲಿ ಕುಳಿತುಕೊಳ್ಳುವ ಮೊದಲೇ, ಒಬ್ಬರು ಅಂಕಪಟ್ಟಿಗಳಿದ್ದ ಫೈಲನ್ನು ಕೈಯಿಂದ ಕಸಿದುಕೊಂಡರಂತೆ. ಆದರೆ ಅದನ್ನು ತೆಗೆದು ನೋಡುಲೇ ಇಲ್ಲವಂತೆ. ನಂತರ ಮೂರೇ ಪ್ರಶ್ನೆ. ನಿಮ್ಮ ಪಿಹೆಚ್.ಡಿ. ವಿಷಯ ಯಾವುದು? ಗೈಡ್ ಯಾರು? ಏನು ವಿಶೇಷ? ನಂತರ ನೀವಿನ್ನು ಹೋಗಬಹುದು ಎಂಬ ವಿದಾಯ ವಾಕ್ಯ. ಸಾಹಿತಿಯೊಬ್ಬರ ಕೃತಿಗಳ ಹಿನ್ನೆಲೆಯಲ್ಲಿ ಅಂದಿನ ಕಾಲಘಟ್ಟದ ಸಾಂಸ್ಕೃತಿಕ ಪಲ್ಲಟಗಳು, ವೈರುದ್ಧ್ಯಗಳು, ಚಳುವಳಿಗಳ ಬಗ್ಗೆ ಒಳ್ಳೆಯ ಮಹಾಪ್ರಬಂಧ ಬರೆದು ಪಿಹೆಚ್.ಡಿ. ಪದವಿ ಗಳಿಸಿರುವ ನನ್ನ ಗೆಳೆಯರೊಬ್ಬರಿಗೆ ಸಂದರ್ಶನ ನಡೆಯುವಾಗ ಕೇವಲ ಎರಡೇ ನಿಮಿಷದಲ್ಲಿ ಬಿರುಸಿನ ಮಾತು ಕಥೆಗಳಾದವಂತೆ. ಆ ಅಭ್ಯರ್ಥಿ ಕೊಠಡಿಯಿಂದ ಹೊರ ಬರುವಾಗ ’ಎಷ್ಟೇ ಆಗಲಿ ಅವರ ಶಿಷ್ಯರಲ್ಲವೆ?’ ಎಂದು ಮೂದಲಿಕೆಯ ದನಿಯೂ ಹಿಂಬಾಲಿಸಿತಂತೆ!
ಒಂಬತ್ತು ಗಂಟೆಯ ಹೊತ್ತಿಗೆ ಒಳಗೆ ಕಳುಹಿಸಲು, ದಾಖಲೆಗಳ ಪರಿಶೀಲನೆ ಮುಗಿದಿರುವ ಅಭ್ಯರ್ಥಿಗಳೇ ಇರಲಿಲ್ಲ!
ಮತ್ತೆ ವಿ.ಸಿ.ಯವರು ಮತ್ತೆ ಹೊರಬಂದರು. ಮತ್ತೊಂದು ಟೇಬಲ್ ಹಾಕಿಸಿ ಬೇಗ ಬೇಗ ಪರಿಶಿಲನೆ ನಡೆಸುವಂತೆ ಸೂಚನೆ ಕೊಟ್ಟು ಒಳ ಹೋದರು. ಸುಮಾರು ಒಂಬತ್ತೂವರೆಗೆ ನಾನು ಸಂದರ್ಶಕರ ಮುಂದಿದ್ದೆ. ಮೇಲೆ ಹೇಳಿದ ಮೂರು ಪ್ರಶ್ನೆಗಳಲ್ಲಿ ಮೊದಲ ಎರಡೂ ಪ್ರಶ್ನೆಗಳಲ್ಲಿ ಯಾವುದೇ ಬದಲಾವಣೆ ಇರಲಿಲ್ಲ. ಮೂರನೆಯ ಪ್ರಶ್ನೆ ಸಂಸ್ಕೃತ ಸಂಗೀತ ಕೃತಿಗಳಿಗೆ ಸಂಬಂಧಿಸಿದ್ದಾಗಿತ್ತು. ನಂತರ ಅದೇ ವಿದಾಯ ವಾಕ್ಯ. ಕೇವಲ ಎರಡು ನಿಮಿಷಗಳಲ್ಲಿ ನಾನು ಒಳಗೆ ತೆಗೆದುಕೊಂಡು ಹೋಗಿದ್ದ ನನ್ನ ಪುಸ್ತಕ ಲೇಖನಗಳ ಕಟ್ಟು ಅಂಕಪಟ್ಟಿಗಳನ್ನು ಹಿಡಿದು ಹೊರಬಿದ್ದಿದ್ದೆ.
ಸರಿ ಇನ್ನು ಕಾಯುವುದರಲ್ಲಿ ಅರ್ಥವಿಲ್ಲ ಎಂದು ಹೊರಡಲು ಸಿದ್ದವಾಗುತ್ತಿದ್ದಾಗ, ನಮ್ಮ ಪರಿಚಿತರೊಬ್ಬರು, ’ನಾನು ಕಾರಿನಲ್ಲಿ ಬಂದಿದ್ದೇನೆ. ಒಟ್ಟಿಗೆ ಹೋಗೋಣ. ನನ್ನದೂ ಸಂದರ್ಶನ ಆಗುವವರೆಗೆ ಕಾಯಿರಿ’ ಎಂದರು.
ಸರಿ ನಾವೂ ಅದೂ ಇದೂ ಮಾತನಾಡುತ್ತಾ ಕುಳಿತೆವು. ದಾಖಲೆಗಳ ಪರಿಶೀಲನೆ ಅಭ್ಯರ್ಥಿಗಳ ಹೆಸರಿನ ಆಂಗ್ಲ ವರ್ಣಾನುಕ್ರಮಣಿಕೆಯಲ್ಲಿ ನಡೆಯುತ್ತಿತ್ತು. ಆದರೆ ಪರಿಶೀಲಕರ ಸಂಖ್ಯೆ ಒಂದರಿಂದ ಮೂರಾಗಿದ್ದದರಿಂದ, ಅವರು ಅಭ್ಯರ್ಥಿಗಳ ಪಟ್ಟಿಯ ಪುಟಗಳನ್ನು ಹಂಚಿಕೊಂಡಿದ್ದರಿಂದ ನಮಗೆ ಕಾಯಲು ಹೇಳಿದ ಮಿತ್ರರ ಹೆಸರು ಕೆಳಗಿನಿಂದ ಮೂರನೆಯವರದ್ದಾಗಿತ್ತು. ಅಲ್ಲಿಯವರೆಗೆ ಕಾಯಲೇ ಬೇಕಾಗಿತ್ತು. ಬೆಳಿಗ್ಗೆ ನಾಲ್ಕೂವರೆಗೆ ಮನೆ ಬಿಟ್ಟಿದ್ದ ನಾವು (ಅಲ್ಲಿದ್ದ ಬಹುತೇಕರು) ಕಾಫಿ ಬಿಟ್ಟು ಬೇರೇನನ್ನೂ ಕಂಡಿರಲಿಲ್ಲ. ನಮ್ಮ ಮಿತ್ರರ ಸಂದರ್ಶನ ಮುಗಿಯುವಷ್ಟರಲ್ಲಿ ಹನ್ನೊಂದು ಗಂಟೆ ಇಪ್ಪತ್ತು ನಿಮಿಷಗಳಾಗಿದ್ದವು. ಇನ್ನು ಇಬ್ಬರಿದ್ದು ಅವರದು ಹನ್ನೊಂದೂವರೆಯ ಹೊರೆಯ ಹೊತ್ತಿಗೆ ಮುಗಿಯಬಹುದು ಎಂದುಕೊಂಡು ನಾವು ಕಾರು ಹತ್ತಿದೆವು.
ಬೆಳಿಗ್ಗೆ ಏಳೂವರೆಯಿಂದ ಹನ್ನೊಂದೂವರೆಯವರೆಗೆ ನಡೆದ ಸಂದರ್ಶನದಲ್ಲಿ ಅರವತ್ತೆಂಟು ಅಭ್ಯರ್ಥಿಗಳಿಗೆ ಸಂದರ್ಶನ ನಡೆದಿತ್ತು. ಅದೂ ವಿಶ್ವವಿದ್ಯಾಲಯವೊಂದರ ಸಹಾಯಕ ಪ್ರಾಧ್ಯಪಕರ ಹುದ್ದೆಗಳಿಗೆ! (ಮಧ್ಯೆ ಸಂದರ್ಶಕರ ಉಪಾಹಾರ, ಎರಡು ಬಾರಿ ಕಾಫಿ/ಟೀ ಸೇವನೆಯೂ ನಡೆಯಿತು! ಆದರೆ ಅಭ್ಯರ್ಥಿಗಳಿಗೆ ತಿಂಡಿಯಿರಲಿ, ೫೦ ಮಿಲಿ ಕಾಫಿಯೂ ಇಲ್ಲ). ಸಂದರ್ಶನ ನಡೆಯುತ್ತಿದ್ದಾಗಲೇ ವಿ.ಸಿ.ಯವರು ಹೊರ ಬಂದು ಒಬ್ಬರ (ಹಿರಿಯರ?) ಜೊತೆಗೆ ಸುಮಾರು ಹತ್ತು ನಿಮಿಷಗಳ ಗಹನ ಚರ್ಚೆ ನಡೆಸಿ ಒಳಹೋಗಿದ್ದು ನಡೆಯಿತು.
ಇಷ್ಟೆಲ್ಲಾ ಹೇಳಿದ ಮೇಲೆ ಅಲ್ಲಿ ನಮ್ಮ ಗಮನಕ್ಕೆ ಬಂದ ಹಲವಾರು ಸಂಗತಿಗಳನ್ನು ಇಲ್ಲಿ ಹೇಳಲೇಬೇಕು. ಇದೇ ಮೊದಲ ಬಾರಿ ವಿಶ್ವವಿದ್ಯಾಲಯ ಒಂದಕ್ಕೆ ಸಂದರ್ಶನಕ್ಕೆ ಹೋಗಿದ್ದ ನಾನು ಎಲ್ಲವನ್ನೂ ಬೆರಗುಗಣ್ಣುಗಳಿಂದ ನೋಡುತ್ತಿದ್ದೆ. ಅಲ್ಲಿದ್ದ ಎಲ್ಲಾ ಸಿಬ್ಬಂಧಿಗಳೂ ಯಾವುದೋ ಅವಸರದಲ್ಲಿದ್ದವರಂತೆ ಕಾಣುತ್ತಿದ್ದರು. ಅಲ್ಲಿದ್ದವರೆಲ್ಲ ಎಷ್ಟು ಅವಸರದಲ್ಲಿದ್ದಂದರೆ, ಅಭ್ಯರ್ಥಿಗಳ ಬ್ಯಾಗು ಸೂಟ್ಕೇಸುಗಳನ್ನು ವಿವಿಯ ಅಧಿಕಾರಿಗಳೇ ಎತ್ತಿಕೊಡುವುದು ಜೋಡಿಸಿಕೊಡುವುದು ನೋಡಿದರೆ, ’ಇವರೆಲ್ಲಾ ಬೇಗ ಇಲ್ಲಿಂದ ತೊಲಗಿದರೆ ಸಾಕು’ ಎನ್ನುವಂತಿತ್ತು!
ಸ್ವತಃ ವಿ.ಸಿ.ಯವರು ಬಾರೀ ಅವರಸರದಲ್ಲಿದ್ದರು. ಅದಕ್ಕೆ ಅಲ್ಲಿದ್ದ ಅಧಿಕಾರಿಯೊಬ್ಬರು ಕೊಟ್ಟ ಕಾರಣ ಏನು ಗೊತ್ತೆ? ಮಧ್ಯಾಹ್ನ ಪದವಿ ತರಗತಿಗಳು ಪ್ರಾರಂಭವಾಗುವುದರಿಂದ ಅಷ್ಟರಲ್ಲಿ ಸಂದರ್ಶನ ಮುಗಿಸಬೇಕು ಎಂಬುದು! ಆದರೆ ಇದೊಂದು ಕಾರಣವೇ ಅಲ್ಲ ಎಂಬುದು ಎಂಥವರಿಗೂ ಅರ್ಥವಾಗುತ್ತದೆ.
ನಾವು ಗಮನಿಸಿದಂತೆ ಗರಿಷ್ಠ ನಾಲ್ಕೈದು ನಿಮಿಷಗಳಿಗಿಂತ ಯಾರಿಗೂ ಹೆಚ್ಚು ಸಮಯ ಸಂದರ್ಶನ ನಡೆಯಲಿಲ್ಲ. ಒಬ್ಬ ಅಭ್ಯರ್ಥಿಯನ್ನು ಬಿಟ್ಟು! ಬಹುಶಃ ಸಂದರ್ಶಕರು ತಿಂಡಿ ತಿನ್ನುವ ಸಮಯದಲ್ಲಿ ಅವರು ಒಳಹೋಗಿದ್ದರಿಂದ ಇರಬಹುದು ಎಂದು ನಾನು ಭಾವಿಸಿದ್ದೆ. ಆಗ ಅವರಿಗೆ ಸುಮಾರು ಹತ್ತು ನಿಮಿಷ ಹಿಡಿದಿತ್ತು. ಆದರೆ ನಂತರ ಅಲ್ಲಿ ಹರಿದಾಡಿದ ಸುದ್ದಿಗಳು ಮಾತ್ರ ಗಾಬರಿ ಹುಟ್ಟಿಸುವಂತಿದ್ದವು. ಏಕೆಂದರೆ ಆ ಅಭ್ಯರ್ಥಿ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕೇಶವಶಿಲ್ಪದ ಆವರಣದಲ್ಲೇ ವಾಸ್ತವ್ಯ ಹೂಡಿದ್ದವರು! ಸರ್ಕಾರದ ಆನ್ಲೈನ್ ವಿಶ್ವಕೋಶ ಖಜಾನೆಗೂ ಕೆಲಸ ಮಾಡುತ್ತಿರುವವರು. ಅವರಿಗೆ ಒಂದು ಪೋಸ್ಟ್ ಗ್ಯಾರಂಟಿ ಎಂಬಬುದು ಇನ್ನೂ ಗಾಬರಿ ಹುಟ್ಟಿಸುವಂತಿತ್ತು. ಅದರ ಜೊತೆಗೆ ಅವರ ನಡುವಳಿಕೆಯೂ ಅದಕ್ಕೆ ಪೂರಕವಾಗಿತ್ತು. ಸುಮಾರು ಎಂಟು ಗಂಟೆ ಇಪ್ಪತ್ತು ನಿಮಿಷಕ್ಕೆ ಅವರ ಸಂದರ್ಶನ ಮುಗಿದರೂ ಅವರು ಹನ್ನೊಂದುವರೆಯವರೆಗೂ ಅಲ್ಲಿಂದ ಅಲುಗಲಿಲ್ಲ. ಬೇರೆಯವರ ಜೊತೆ ಅಷ್ಟೊಂದು ಬೆರೆಯಲೂ ಇಲ್ಲ. ಅಲ್ಲಿದ್ದ ವಿವಿಯ ಬೇರೆ ಬೇರೆ ಅಧಿಕಾರಿಗಳ ಜೊತೆಯಲ್ಲಷ್ಟೇ ಮಾತು. ಹೆಚ್ಚು ಹೊತ್ತು ಕುರ್ಚಿಯಲ್ಲಿ ಒಬ್ಬರೇ ಕುಳಿತು ಕಾಲ ದೂಡುತ್ತಿದ್ದರು. ಜೊತೆಗೆ ’ತುಮಕೂರು ವಿವಿಯ ಅಫಿಲಿಯೇಟೆಡ್ ಕಾಲೇಜೊಂದರಲ್ಲಿ ಕೆಲಸ ಮಾಡುತ್ತಿರುವ ಅಭ್ಯರ್ಥಿಯೊಬ್ಬರಿಗೆ ಒಂದು ಪೋಸ್ಟ್ ಈಗಾಗಲೇ ಬುಕ್ ಆಗಿದೆ’ ಎಂಬ ಸುದ್ದಿಯೂ ಅಲ್ಲಿ ಹಬ್ಬಿಬಿಟ್ಟಿತ್ತು! ಪಾಪ, ನಿಜವಾದ ಅರ್ಹತೆಯಿದ್ದರೂ ಅವರನ್ನು ಅನುಮಾನದಿಂದ ನೋಡುವದಂತೂ ತಪ್ಪುವುದಿಲ್ಲ.
ಯಾರೋ ಒಬ್ಬರು ಸ್ವಲ್ಪ ಜೋರಾಗಿಯೇ ’ಒಂದು ವಿವಿಯ ಉಪನ್ಯಾಸಕರಿಗೆ ನಡೆಸುವ ಸಂದರ್ಶನದಲ್ಲಿ ನಮ್ಮ ಬಗ್ಗೆ ಹೇಳಿಕೊಳ್ಳಲು ಒಂದು ನಿಮಿಷದ ಕಾಲಾವಕಾಶವೂ ಇಲ್ಲ! ಹೋದ್ಯಾ ಪುಟ್ಟ ಬಂದ್ಯಾ ಪುಟ್ಟ! ಎಲ್ಲಾ ವ್ಯವಸ್ಥಿತ ನಾಟಕವಾಡುತ್ತಿದ್ದಾರೆ. ಇನ್ನು ಕೇವಲ ನಾಲ್ಕೇ ದಿನಗಳಲ್ಲಿ ಲಿಸ್ಟ್ ಅನೌನ್ಸ್ ಮಾಡಿ, ಐದನೇ ದಿನದಲ್ಲಿ ಅವರೆಲ್ಲಾ ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳುವಂತೆ ನೋಡಿಕೊಳ್ಳುತ್ತಾರೆ. ಈಗಾಗಲೇ ಕೆಲವು ವಿಷಯಗಳಿಗೆ ನಡೆದ ಸಂದರ್ಶನದಲ್ಲಿ ಹೀಗೆಯೇ ಆಗಿದೆ. ಕೋರ್ಟಿನವರು ಚಾಪೆ ಕೆಳಗೆ ನುಸುಳಿದರೆ ಇವರು ರಂಗೋಲಿಯ ಕೆಳಗೆ ನುಸುಳುತ್ತಾರೆ’ ಎಂದು ಗೊಣಗಿದರು. ಅಷ್ಟರಲ್ಲಿ ಇನ್ನೊಬ್ಬರು ’ಆರ್.ಎಸ್.ಎಸ್. ಮಂತ್ರಿ; ಆರ್.ಎಸ್.ಎಸ್. ವಿ.ಸಿ.’ ಎಂದು ಏನೇನೋ ಮಾತನಾಡಿದರು.
ಇಂದು ನಮ್ಮ ದೇಶದಲ್ಲಿ ಎಲ್ಲಿ ಏನೇ ನಡೆದರೂ ಅದಕ್ಕೆ ರಾಜಕೀಯ ಬಣ್ಣ ಬಂದು ಬಿಡುತ್ತದೆ. ಅಷ್ಟರ ಮಟ್ಟಿಗೆ ರಾಜಕೀಯ ಎಲ್ಲವನ್ನೂ ಹೊಲಸೆಬ್ಬಿಸಿಬಿಟ್ಟಿದೆ. ವಿವಿಯಲ್ಲಿ ನಡೆಯುವ ಸಣ್ಣಪುಟ್ಟ ಘಟನೆಗಳಿಗೂ ರಾಜಕೀಯ ಕಾರಣಗಳು ಹುಟ್ಟಿಕೊಳ್ಳುತ್ತವೆ. ದುರದೃಷ್ಟವೆಂದರೆ ಅವುಗಳಲ್ಲಿ ಹೆಚ್ಚಿನವುಗಳು ನಿಜವೂ ಆಗಿಬಿಡುವುದು.
ಕೇವಲ ಸುಮಾರು ೨೦೦ ರಿಂದ ೨೪೦ ನಿಮಿಷಗಳಲ್ಲಿ ಅರವತ್ತೆಂಟು ಅಭ್ಯರ್ಥಿಗಳಿಗೆ - ವಿಶ್ವವಿದ್ಯಾಲಯವೊಂದರಲ್ಲಿ ಕಾರ್ಯ ನಿರ್ವಹಿಸಬೇಕಾದ ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗೆ - (ಸರಾಸರಿ ಒಬ್ಬರಿಗೆ ೩ ರಿಂದ ೩.೫ ನಿಮಿಷ ಮಾತ್ರ; ಅವರು ಒಳ ಹೋಗುವ, ಹೊರ ಬರುವ ಸಮಯ, ಕಾಫಿ ತಿಂಡಿಯ ಸಮಯ ಕಳೆದರೆ ಸರಾಸರಿ ಎರಡೂವರೆ ನಿಮಿಷಕ್ಕೆ ಇಳಿಯುತ್ತದೆ!) ಸಂದರ್ಶನ ನಡೆಸಿ ತುಮಕೂರು ವಿವಿ ವಿಶ್ವದಾಖಲೆಗೆ ಅರ್ಹವಾಗಿದೆ. ಅದಕ್ಕೆ ನೀವೂ ಒಂದಷ್ಟು ಅಭಿನಂದನೆ ಸಲ್ಲಿಸಿಬಿಡಿ!
ಇದೇ ಮೊದಲ ಬಾರಿಗೆ ಕನ್ನಡ ಉಪನ್ಯಾಸಕ ಹುದ್ದೆಯೊಂದಕ್ಕೆ, ವಿವಿಯ ಮಟ್ಟದಲ್ಲಿ ಸಂದರ್ಶನಕ್ಕೆ ಹೊರಟಿದ್ದ ನಾನು ನನ್ನ ಎಲ್ಲಾ ದಾಖಲೆಗಳನ್ನು, ಪ್ರಕಟಣೆಗಳನ್ನು ಹೊತ್ತು, ನನ್ನಂತೆಯೇ ಸಂದರ್ಶನಕ್ಕೆ ಹೊರಟಿದ್ದ ನನ್ನ ಮಿತ್ರರೊಬ್ಬರ ಜೊತೆಗೆ, ಬೆಳಿಗ್ಗೆ ೭.೪೦ ಗಂಟೆಗೆ ತುಮಕೂರು ತಲುಪಿದ್ದೆ. ಅಂದ ಹಾಗೆ ಸಂದರ್ಶನದ ಸಮಯ ನಿಗದಿಯಾಗಿದ್ದು ಬೆಳಿಗ್ಗೆ ೭.೩೦ ಗಂಟೆಗೆ! ನಾವು ಅಲ್ಲಿಗೆ ಹೋಗುವಷ್ಟರಲ್ಲಿ ಸುಮಾರು ಎಪ್ಪತ್ತು ಎಂಬತ್ತು ಜನ ಅಲ್ಲಿ ಜಮಾಯಿಸಿದ್ದರು. ನಾಲ್ಕೈದು ಪರಿಚಿತ ಮುಖಗಳೂ ಇದ್ದವು. ನನ್ನ ಸಹದ್ಯೋಗಿಯೊಬ್ಬರೂ ಸಂದರ್ಶನಕ್ಕೆ ಬಂದಿದ್ದರು. ಒಂದೆರಡು ದಿನಗಳ ಮುಂಚೆಯಷ್ಟೇ ಸಂದರ್ಶನದ ಮಾಹಿತಿ ಸಿಕ್ಕಿದ್ದರಿಂದ ನಮಗೆ ಪರಸ್ಪರ ಗೊತ್ತೇ ಆಗಿರಲಿಲ್ಲ.
ಗದ್ದಲವೋ ಗದ್ದಲ. ಒಂದು ಮೂಲೆಯಲ್ಲಿ ಅಭ್ಯರ್ಥಿಗಳ ಕಾಗದ ಪತ್ರ ಅಂಕಪಟ್ಟಿ ಪುಸ್ತಕ ಲೇಖನ ಮೊದಲಾದವುಗಳನ್ನು ಪರಿಶೀಲಿಸಲಾಗುತ್ತಿತ್ತು. ಒಬ್ಬೊಬ್ಬರದಕ್ಕೆ ಕನಿಷ್ಠ ೧೦ ನಿಮಿಷಗಳಾದರೂ ಬೇಕಾಗುತ್ತಿತ್ತು. ಅಷ್ಟರಲ್ಲೇ ನಾಲ್ಕೈದು ಜನರ ಸಂದರ್ಶನವೂ ಮುಗಿದು ಹೋಗಿತ್ತು!
ಸಂದರ್ಶನ ನಡೆಸುವವರ ವೇಗಕ್ಕೆ ಅನುಗುಣವಾಗಿ ದಾಖಲೆಗಳ ಪರಿಶೀಲನೆ ನಡೆಯುತ್ತಿರಲಿಲ್ಲ. ಅದನ್ನು ತಿಳಿದ ವಿ.ಸಿ.ಯವರು ಸ್ವತಃ ಸಂದರ್ಶನದ ಕೊಠಡಿಯಿಂದ ಬಂದು, ಇನ್ನಿಬ್ಬರನ್ನು ಆ ಕೆಲಸಕ್ಕೆ ನೇಮಿಸಿ ಬೇಗ ಬೇಗ ಪರಿಶೀಲನೆ ನಡೆಸುವಂತೆ ಆಜ್ಞೆಯಿತ್ತು ಮತ್ತೆ ಒಳ ಹೋದರು. ಕೇವಲ ಎರಡು ನಿಮಿಷಗಳಲ್ಲಿ ಒಬ್ಬ ಅಭ್ಯರ್ಥಿಯ ಸಂದರ್ಶನ ಮುಗಿದು ಹೋಗುತ್ತಿತ್ತು!
ಎಂಟೂವರೆಯ ಹೊತ್ತಿಗೆ ನನ್ನ ಜೊತೆಯಲ್ಲಿ ಬಂದಿದ್ದ ಸ್ನೇಹಿತರ ಸಂದರ್ಶನ ಮುಗಿದು ಹೋಯಿತು. ’ಇದೇನು ಸದರ್ಶನವೋ? ನಾಟಕವೋ?’ ಎನ್ನುತ್ತಲೇ ಹೊರ ಬಂದರು. ನಾನು ಸಮಯ ನೋಡಿಕೊಂಡಿದ್ದೆ. ಸರಿಯಾಗಿ ಒಂದೂಮುಕ್ಕಾಲು ನಿಮಿಷದಲ್ಲಿ ಅವರು ಹೊರಗೆ ಬಂದಿದ್ದರು! ಒಳ ಹೋದ ತಕ್ಷಣ ಕುರ್ಚಿಯಲ್ಲಿ ಕುಳಿತುಕೊಳ್ಳುವ ಮೊದಲೇ, ಒಬ್ಬರು ಅಂಕಪಟ್ಟಿಗಳಿದ್ದ ಫೈಲನ್ನು ಕೈಯಿಂದ ಕಸಿದುಕೊಂಡರಂತೆ. ಆದರೆ ಅದನ್ನು ತೆಗೆದು ನೋಡುಲೇ ಇಲ್ಲವಂತೆ. ನಂತರ ಮೂರೇ ಪ್ರಶ್ನೆ. ನಿಮ್ಮ ಪಿಹೆಚ್.ಡಿ. ವಿಷಯ ಯಾವುದು? ಗೈಡ್ ಯಾರು? ಏನು ವಿಶೇಷ? ನಂತರ ನೀವಿನ್ನು ಹೋಗಬಹುದು ಎಂಬ ವಿದಾಯ ವಾಕ್ಯ. ಸಾಹಿತಿಯೊಬ್ಬರ ಕೃತಿಗಳ ಹಿನ್ನೆಲೆಯಲ್ಲಿ ಅಂದಿನ ಕಾಲಘಟ್ಟದ ಸಾಂಸ್ಕೃತಿಕ ಪಲ್ಲಟಗಳು, ವೈರುದ್ಧ್ಯಗಳು, ಚಳುವಳಿಗಳ ಬಗ್ಗೆ ಒಳ್ಳೆಯ ಮಹಾಪ್ರಬಂಧ ಬರೆದು ಪಿಹೆಚ್.ಡಿ. ಪದವಿ ಗಳಿಸಿರುವ ನನ್ನ ಗೆಳೆಯರೊಬ್ಬರಿಗೆ ಸಂದರ್ಶನ ನಡೆಯುವಾಗ ಕೇವಲ ಎರಡೇ ನಿಮಿಷದಲ್ಲಿ ಬಿರುಸಿನ ಮಾತು ಕಥೆಗಳಾದವಂತೆ. ಆ ಅಭ್ಯರ್ಥಿ ಕೊಠಡಿಯಿಂದ ಹೊರ ಬರುವಾಗ ’ಎಷ್ಟೇ ಆಗಲಿ ಅವರ ಶಿಷ್ಯರಲ್ಲವೆ?’ ಎಂದು ಮೂದಲಿಕೆಯ ದನಿಯೂ ಹಿಂಬಾಲಿಸಿತಂತೆ!
ಒಂಬತ್ತು ಗಂಟೆಯ ಹೊತ್ತಿಗೆ ಒಳಗೆ ಕಳುಹಿಸಲು, ದಾಖಲೆಗಳ ಪರಿಶೀಲನೆ ಮುಗಿದಿರುವ ಅಭ್ಯರ್ಥಿಗಳೇ ಇರಲಿಲ್ಲ!
ಮತ್ತೆ ವಿ.ಸಿ.ಯವರು ಮತ್ತೆ ಹೊರಬಂದರು. ಮತ್ತೊಂದು ಟೇಬಲ್ ಹಾಕಿಸಿ ಬೇಗ ಬೇಗ ಪರಿಶಿಲನೆ ನಡೆಸುವಂತೆ ಸೂಚನೆ ಕೊಟ್ಟು ಒಳ ಹೋದರು. ಸುಮಾರು ಒಂಬತ್ತೂವರೆಗೆ ನಾನು ಸಂದರ್ಶಕರ ಮುಂದಿದ್ದೆ. ಮೇಲೆ ಹೇಳಿದ ಮೂರು ಪ್ರಶ್ನೆಗಳಲ್ಲಿ ಮೊದಲ ಎರಡೂ ಪ್ರಶ್ನೆಗಳಲ್ಲಿ ಯಾವುದೇ ಬದಲಾವಣೆ ಇರಲಿಲ್ಲ. ಮೂರನೆಯ ಪ್ರಶ್ನೆ ಸಂಸ್ಕೃತ ಸಂಗೀತ ಕೃತಿಗಳಿಗೆ ಸಂಬಂಧಿಸಿದ್ದಾಗಿತ್ತು. ನಂತರ ಅದೇ ವಿದಾಯ ವಾಕ್ಯ. ಕೇವಲ ಎರಡು ನಿಮಿಷಗಳಲ್ಲಿ ನಾನು ಒಳಗೆ ತೆಗೆದುಕೊಂಡು ಹೋಗಿದ್ದ ನನ್ನ ಪುಸ್ತಕ ಲೇಖನಗಳ ಕಟ್ಟು ಅಂಕಪಟ್ಟಿಗಳನ್ನು ಹಿಡಿದು ಹೊರಬಿದ್ದಿದ್ದೆ.
ಸರಿ ಇನ್ನು ಕಾಯುವುದರಲ್ಲಿ ಅರ್ಥವಿಲ್ಲ ಎಂದು ಹೊರಡಲು ಸಿದ್ದವಾಗುತ್ತಿದ್ದಾಗ, ನಮ್ಮ ಪರಿಚಿತರೊಬ್ಬರು, ’ನಾನು ಕಾರಿನಲ್ಲಿ ಬಂದಿದ್ದೇನೆ. ಒಟ್ಟಿಗೆ ಹೋಗೋಣ. ನನ್ನದೂ ಸಂದರ್ಶನ ಆಗುವವರೆಗೆ ಕಾಯಿರಿ’ ಎಂದರು.
ಸರಿ ನಾವೂ ಅದೂ ಇದೂ ಮಾತನಾಡುತ್ತಾ ಕುಳಿತೆವು. ದಾಖಲೆಗಳ ಪರಿಶೀಲನೆ ಅಭ್ಯರ್ಥಿಗಳ ಹೆಸರಿನ ಆಂಗ್ಲ ವರ್ಣಾನುಕ್ರಮಣಿಕೆಯಲ್ಲಿ ನಡೆಯುತ್ತಿತ್ತು. ಆದರೆ ಪರಿಶೀಲಕರ ಸಂಖ್ಯೆ ಒಂದರಿಂದ ಮೂರಾಗಿದ್ದದರಿಂದ, ಅವರು ಅಭ್ಯರ್ಥಿಗಳ ಪಟ್ಟಿಯ ಪುಟಗಳನ್ನು ಹಂಚಿಕೊಂಡಿದ್ದರಿಂದ ನಮಗೆ ಕಾಯಲು ಹೇಳಿದ ಮಿತ್ರರ ಹೆಸರು ಕೆಳಗಿನಿಂದ ಮೂರನೆಯವರದ್ದಾಗಿತ್ತು. ಅಲ್ಲಿಯವರೆಗೆ ಕಾಯಲೇ ಬೇಕಾಗಿತ್ತು. ಬೆಳಿಗ್ಗೆ ನಾಲ್ಕೂವರೆಗೆ ಮನೆ ಬಿಟ್ಟಿದ್ದ ನಾವು (ಅಲ್ಲಿದ್ದ ಬಹುತೇಕರು) ಕಾಫಿ ಬಿಟ್ಟು ಬೇರೇನನ್ನೂ ಕಂಡಿರಲಿಲ್ಲ. ನಮ್ಮ ಮಿತ್ರರ ಸಂದರ್ಶನ ಮುಗಿಯುವಷ್ಟರಲ್ಲಿ ಹನ್ನೊಂದು ಗಂಟೆ ಇಪ್ಪತ್ತು ನಿಮಿಷಗಳಾಗಿದ್ದವು. ಇನ್ನು ಇಬ್ಬರಿದ್ದು ಅವರದು ಹನ್ನೊಂದೂವರೆಯ ಹೊರೆಯ ಹೊತ್ತಿಗೆ ಮುಗಿಯಬಹುದು ಎಂದುಕೊಂಡು ನಾವು ಕಾರು ಹತ್ತಿದೆವು.
ಬೆಳಿಗ್ಗೆ ಏಳೂವರೆಯಿಂದ ಹನ್ನೊಂದೂವರೆಯವರೆಗೆ ನಡೆದ ಸಂದರ್ಶನದಲ್ಲಿ ಅರವತ್ತೆಂಟು ಅಭ್ಯರ್ಥಿಗಳಿಗೆ ಸಂದರ್ಶನ ನಡೆದಿತ್ತು. ಅದೂ ವಿಶ್ವವಿದ್ಯಾಲಯವೊಂದರ ಸಹಾಯಕ ಪ್ರಾಧ್ಯಪಕರ ಹುದ್ದೆಗಳಿಗೆ! (ಮಧ್ಯೆ ಸಂದರ್ಶಕರ ಉಪಾಹಾರ, ಎರಡು ಬಾರಿ ಕಾಫಿ/ಟೀ ಸೇವನೆಯೂ ನಡೆಯಿತು! ಆದರೆ ಅಭ್ಯರ್ಥಿಗಳಿಗೆ ತಿಂಡಿಯಿರಲಿ, ೫೦ ಮಿಲಿ ಕಾಫಿಯೂ ಇಲ್ಲ). ಸಂದರ್ಶನ ನಡೆಯುತ್ತಿದ್ದಾಗಲೇ ವಿ.ಸಿ.ಯವರು ಹೊರ ಬಂದು ಒಬ್ಬರ (ಹಿರಿಯರ?) ಜೊತೆಗೆ ಸುಮಾರು ಹತ್ತು ನಿಮಿಷಗಳ ಗಹನ ಚರ್ಚೆ ನಡೆಸಿ ಒಳಹೋಗಿದ್ದು ನಡೆಯಿತು.
ಇಷ್ಟೆಲ್ಲಾ ಹೇಳಿದ ಮೇಲೆ ಅಲ್ಲಿ ನಮ್ಮ ಗಮನಕ್ಕೆ ಬಂದ ಹಲವಾರು ಸಂಗತಿಗಳನ್ನು ಇಲ್ಲಿ ಹೇಳಲೇಬೇಕು. ಇದೇ ಮೊದಲ ಬಾರಿ ವಿಶ್ವವಿದ್ಯಾಲಯ ಒಂದಕ್ಕೆ ಸಂದರ್ಶನಕ್ಕೆ ಹೋಗಿದ್ದ ನಾನು ಎಲ್ಲವನ್ನೂ ಬೆರಗುಗಣ್ಣುಗಳಿಂದ ನೋಡುತ್ತಿದ್ದೆ. ಅಲ್ಲಿದ್ದ ಎಲ್ಲಾ ಸಿಬ್ಬಂಧಿಗಳೂ ಯಾವುದೋ ಅವಸರದಲ್ಲಿದ್ದವರಂತೆ ಕಾಣುತ್ತಿದ್ದರು. ಅಲ್ಲಿದ್ದವರೆಲ್ಲ ಎಷ್ಟು ಅವಸರದಲ್ಲಿದ್ದಂದರೆ, ಅಭ್ಯರ್ಥಿಗಳ ಬ್ಯಾಗು ಸೂಟ್ಕೇಸುಗಳನ್ನು ವಿವಿಯ ಅಧಿಕಾರಿಗಳೇ ಎತ್ತಿಕೊಡುವುದು ಜೋಡಿಸಿಕೊಡುವುದು ನೋಡಿದರೆ, ’ಇವರೆಲ್ಲಾ ಬೇಗ ಇಲ್ಲಿಂದ ತೊಲಗಿದರೆ ಸಾಕು’ ಎನ್ನುವಂತಿತ್ತು!
ಸ್ವತಃ ವಿ.ಸಿ.ಯವರು ಬಾರೀ ಅವರಸರದಲ್ಲಿದ್ದರು. ಅದಕ್ಕೆ ಅಲ್ಲಿದ್ದ ಅಧಿಕಾರಿಯೊಬ್ಬರು ಕೊಟ್ಟ ಕಾರಣ ಏನು ಗೊತ್ತೆ? ಮಧ್ಯಾಹ್ನ ಪದವಿ ತರಗತಿಗಳು ಪ್ರಾರಂಭವಾಗುವುದರಿಂದ ಅಷ್ಟರಲ್ಲಿ ಸಂದರ್ಶನ ಮುಗಿಸಬೇಕು ಎಂಬುದು! ಆದರೆ ಇದೊಂದು ಕಾರಣವೇ ಅಲ್ಲ ಎಂಬುದು ಎಂಥವರಿಗೂ ಅರ್ಥವಾಗುತ್ತದೆ.
ನಾವು ಗಮನಿಸಿದಂತೆ ಗರಿಷ್ಠ ನಾಲ್ಕೈದು ನಿಮಿಷಗಳಿಗಿಂತ ಯಾರಿಗೂ ಹೆಚ್ಚು ಸಮಯ ಸಂದರ್ಶನ ನಡೆಯಲಿಲ್ಲ. ಒಬ್ಬ ಅಭ್ಯರ್ಥಿಯನ್ನು ಬಿಟ್ಟು! ಬಹುಶಃ ಸಂದರ್ಶಕರು ತಿಂಡಿ ತಿನ್ನುವ ಸಮಯದಲ್ಲಿ ಅವರು ಒಳಹೋಗಿದ್ದರಿಂದ ಇರಬಹುದು ಎಂದು ನಾನು ಭಾವಿಸಿದ್ದೆ. ಆಗ ಅವರಿಗೆ ಸುಮಾರು ಹತ್ತು ನಿಮಿಷ ಹಿಡಿದಿತ್ತು. ಆದರೆ ನಂತರ ಅಲ್ಲಿ ಹರಿದಾಡಿದ ಸುದ್ದಿಗಳು ಮಾತ್ರ ಗಾಬರಿ ಹುಟ್ಟಿಸುವಂತಿದ್ದವು. ಏಕೆಂದರೆ ಆ ಅಭ್ಯರ್ಥಿ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕೇಶವಶಿಲ್ಪದ ಆವರಣದಲ್ಲೇ ವಾಸ್ತವ್ಯ ಹೂಡಿದ್ದವರು! ಸರ್ಕಾರದ ಆನ್ಲೈನ್ ವಿಶ್ವಕೋಶ ಖಜಾನೆಗೂ ಕೆಲಸ ಮಾಡುತ್ತಿರುವವರು. ಅವರಿಗೆ ಒಂದು ಪೋಸ್ಟ್ ಗ್ಯಾರಂಟಿ ಎಂಬಬುದು ಇನ್ನೂ ಗಾಬರಿ ಹುಟ್ಟಿಸುವಂತಿತ್ತು. ಅದರ ಜೊತೆಗೆ ಅವರ ನಡುವಳಿಕೆಯೂ ಅದಕ್ಕೆ ಪೂರಕವಾಗಿತ್ತು. ಸುಮಾರು ಎಂಟು ಗಂಟೆ ಇಪ್ಪತ್ತು ನಿಮಿಷಕ್ಕೆ ಅವರ ಸಂದರ್ಶನ ಮುಗಿದರೂ ಅವರು ಹನ್ನೊಂದುವರೆಯವರೆಗೂ ಅಲ್ಲಿಂದ ಅಲುಗಲಿಲ್ಲ. ಬೇರೆಯವರ ಜೊತೆ ಅಷ್ಟೊಂದು ಬೆರೆಯಲೂ ಇಲ್ಲ. ಅಲ್ಲಿದ್ದ ವಿವಿಯ ಬೇರೆ ಬೇರೆ ಅಧಿಕಾರಿಗಳ ಜೊತೆಯಲ್ಲಷ್ಟೇ ಮಾತು. ಹೆಚ್ಚು ಹೊತ್ತು ಕುರ್ಚಿಯಲ್ಲಿ ಒಬ್ಬರೇ ಕುಳಿತು ಕಾಲ ದೂಡುತ್ತಿದ್ದರು. ಜೊತೆಗೆ ’ತುಮಕೂರು ವಿವಿಯ ಅಫಿಲಿಯೇಟೆಡ್ ಕಾಲೇಜೊಂದರಲ್ಲಿ ಕೆಲಸ ಮಾಡುತ್ತಿರುವ ಅಭ್ಯರ್ಥಿಯೊಬ್ಬರಿಗೆ ಒಂದು ಪೋಸ್ಟ್ ಈಗಾಗಲೇ ಬುಕ್ ಆಗಿದೆ’ ಎಂಬ ಸುದ್ದಿಯೂ ಅಲ್ಲಿ ಹಬ್ಬಿಬಿಟ್ಟಿತ್ತು! ಪಾಪ, ನಿಜವಾದ ಅರ್ಹತೆಯಿದ್ದರೂ ಅವರನ್ನು ಅನುಮಾನದಿಂದ ನೋಡುವದಂತೂ ತಪ್ಪುವುದಿಲ್ಲ.
ಯಾರೋ ಒಬ್ಬರು ಸ್ವಲ್ಪ ಜೋರಾಗಿಯೇ ’ಒಂದು ವಿವಿಯ ಉಪನ್ಯಾಸಕರಿಗೆ ನಡೆಸುವ ಸಂದರ್ಶನದಲ್ಲಿ ನಮ್ಮ ಬಗ್ಗೆ ಹೇಳಿಕೊಳ್ಳಲು ಒಂದು ನಿಮಿಷದ ಕಾಲಾವಕಾಶವೂ ಇಲ್ಲ! ಹೋದ್ಯಾ ಪುಟ್ಟ ಬಂದ್ಯಾ ಪುಟ್ಟ! ಎಲ್ಲಾ ವ್ಯವಸ್ಥಿತ ನಾಟಕವಾಡುತ್ತಿದ್ದಾರೆ. ಇನ್ನು ಕೇವಲ ನಾಲ್ಕೇ ದಿನಗಳಲ್ಲಿ ಲಿಸ್ಟ್ ಅನೌನ್ಸ್ ಮಾಡಿ, ಐದನೇ ದಿನದಲ್ಲಿ ಅವರೆಲ್ಲಾ ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳುವಂತೆ ನೋಡಿಕೊಳ್ಳುತ್ತಾರೆ. ಈಗಾಗಲೇ ಕೆಲವು ವಿಷಯಗಳಿಗೆ ನಡೆದ ಸಂದರ್ಶನದಲ್ಲಿ ಹೀಗೆಯೇ ಆಗಿದೆ. ಕೋರ್ಟಿನವರು ಚಾಪೆ ಕೆಳಗೆ ನುಸುಳಿದರೆ ಇವರು ರಂಗೋಲಿಯ ಕೆಳಗೆ ನುಸುಳುತ್ತಾರೆ’ ಎಂದು ಗೊಣಗಿದರು. ಅಷ್ಟರಲ್ಲಿ ಇನ್ನೊಬ್ಬರು ’ಆರ್.ಎಸ್.ಎಸ್. ಮಂತ್ರಿ; ಆರ್.ಎಸ್.ಎಸ್. ವಿ.ಸಿ.’ ಎಂದು ಏನೇನೋ ಮಾತನಾಡಿದರು.
ಇಂದು ನಮ್ಮ ದೇಶದಲ್ಲಿ ಎಲ್ಲಿ ಏನೇ ನಡೆದರೂ ಅದಕ್ಕೆ ರಾಜಕೀಯ ಬಣ್ಣ ಬಂದು ಬಿಡುತ್ತದೆ. ಅಷ್ಟರ ಮಟ್ಟಿಗೆ ರಾಜಕೀಯ ಎಲ್ಲವನ್ನೂ ಹೊಲಸೆಬ್ಬಿಸಿಬಿಟ್ಟಿದೆ. ವಿವಿಯಲ್ಲಿ ನಡೆಯುವ ಸಣ್ಣಪುಟ್ಟ ಘಟನೆಗಳಿಗೂ ರಾಜಕೀಯ ಕಾರಣಗಳು ಹುಟ್ಟಿಕೊಳ್ಳುತ್ತವೆ. ದುರದೃಷ್ಟವೆಂದರೆ ಅವುಗಳಲ್ಲಿ ಹೆಚ್ಚಿನವುಗಳು ನಿಜವೂ ಆಗಿಬಿಡುವುದು.
ಕೇವಲ ಸುಮಾರು ೨೦೦ ರಿಂದ ೨೪೦ ನಿಮಿಷಗಳಲ್ಲಿ ಅರವತ್ತೆಂಟು ಅಭ್ಯರ್ಥಿಗಳಿಗೆ - ವಿಶ್ವವಿದ್ಯಾಲಯವೊಂದರಲ್ಲಿ ಕಾರ್ಯ ನಿರ್ವಹಿಸಬೇಕಾದ ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗೆ - (ಸರಾಸರಿ ಒಬ್ಬರಿಗೆ ೩ ರಿಂದ ೩.೫ ನಿಮಿಷ ಮಾತ್ರ; ಅವರು ಒಳ ಹೋಗುವ, ಹೊರ ಬರುವ ಸಮಯ, ಕಾಫಿ ತಿಂಡಿಯ ಸಮಯ ಕಳೆದರೆ ಸರಾಸರಿ ಎರಡೂವರೆ ನಿಮಿಷಕ್ಕೆ ಇಳಿಯುತ್ತದೆ!) ಸಂದರ್ಶನ ನಡೆಸಿ ತುಮಕೂರು ವಿವಿ ವಿಶ್ವದಾಖಲೆಗೆ ಅರ್ಹವಾಗಿದೆ. ಅದಕ್ಕೆ ನೀವೂ ಒಂದಷ್ಟು ಅಭಿನಂದನೆ ಸಲ್ಲಿಸಿಬಿಡಿ!
Subscribe to:
Posts (Atom)