Friday, October 21, 2011

ಮುಂದಿನ ವಾರದ ಲೇಖನಕ್ಕೊಂದು ಮುನ್ನುಡಿ!

ಸಹೃದಯರೆ,
ಮುಂದಿನ ಸೋಮವಾರ (24.10.2011) ಪೋಸ್ಟ್ ಆಗಲಿರುವ ಲೇಖನದ ಶೀರ್ಷಿಕೆ 'ಸೊಗದಂತೆಯೇ ನೋವೂ ಧೀರರಿಗಾಹಾರಮಲ್ತೆ?'. ದೈಹಿಕವಾಗಿ ಮಾನಸಿಕವಾಗಿ ಬಳಲಿದ್ದಾಗ ಕವಿ ಮಾಡುತ್ತಿದ್ದುದೇನು? ಅದರಿಂದಾಗುತ್ತಿದ್ದ ಉಪಯೋಗವೇನು? ಕನ್ನಡದಲ್ಲಿಯೂ ಬರೆಯುವ ದೀಕ್ಷೆ ಪಡೆದ ಮೇಲೆ ಕವಿಗೆ ಒಂದು ನಿರ್ಧಿಷ್ಟ ಗೊತ್ತು ಗುರಿ ಆಶ್ರಯ ದೊರಕಿದ್ದು ಹೇಗೆ? ಮೈಸೂರಿನ ರಾಮಕೃಷ್ಣಾಶ್ರಮ ಹಾಗೂ ಅದರ ಆಗಿನ ಸ್ವಾಮೀಜಿ ಸಿದ್ಧೇಶ್ವರಾನಂದರ ಪ್ರಭಾವವೇನು? ಮಹಾನ್ ಯೋಗಿಯಾಗಿದ್ದ ಸ್ವಾಮಿ ಸಿದ್ಧೇಶ್ವರಾನಂದರ ಕೊಡುಗೆಯೇನು? ಎಲ್ಲವನ್ನೂ ಲೇಖನ ಒಳಗೊಳ್ಳಲಿದೆ. ಮತ್ತೆ ಎಂದಿನಂತೆ ಮೇಲಿನೆಲ್ಲಾ ಪ್ರಶ್ನೆಗಳಿಗೆ ಉತ್ತರರೂಪದಲ್ಲಿರುವಕವಿತೆಗಳು ಇರಲಿವೆ. ಕವಿಯ ಇಚ್ಛಾಶಕ್ತ, ಕೆಚ್ಚು, ನೆಚ್ಚು ಎಲ್ಲವೂ ಬಿಂಬಿತವಾಗಲಿವೆ. ಸೋಮವಾರ ಭೇಟಿಯಾಗೋಣ, ಲೇಖನದೊಂದಿಗೆ. ಅಲ್ಲಿಯವರೆಗೂ ಶುಭಮಸ್ತು, ವಾರಾಂತ್ಯದ ಶುಭಹಾರೈಕೆಗಳು.
ಇಂತಿ ಪ್ರೀತಿಯಿಂದ
ಸತ್ಯನಾರಾಯಣ

No comments: