Monday, January 06, 2014

ಕತ್ತೆ ಏಕೆ ಮಾಂಸ ತಿನ್ನುವುದಿಲ್ಲ?

Photo: ಕತ್ತೆ ಏಕೆ ಮಾಂಸ ತಿನ್ನುವುದಿಲ್ಲ?
First Published (Khushi - Kannadaprabha): 05 Jan 2014 02:00:00 AM IST 
ಆರಂಭದಲ್ಲಿ ಎಲ್ಲಾ ಪ್ರಾಣಿಗಳೂ ಮಾಂಸಾಹಾರಿಗಳೇ ಆಗಿದ್ದುವು. ಒಮ್ಮೆ ಒಂದು ಕಾಡಿನಲ್ಲಿ ಒಂದು ಸಿಂಹ, ಒಂದು ಕತ್ತೆ ಮತ್ತು ಒಂದು ನರಿ ಸ್ನೇಹಿತರಾಗಿ ಒಟ್ಟಿಗೆ ಇದ್ದವು. ವಯಸ್ಸಾಗುತ್ತಾ ಬಂದಂತೆ ಅವುಗಳಿಗೆ ಒಬ್ಬೊಬ್ಬರೇ ಬೇಟೆಯಾಡಿ ಆಹಾರ ಗಳಿಸುವುದು ಕಷ್ಟವಾಯಿತು. ಮೂರೂ ಪ್ರಾಣಿಗಳು ಸಮಾಲೋಚಿಸಿ, ಮೂವರೂ ಒಟ್ಟಿಗೆ ಸೇರಿ ಬೇಟೆಯಾಡುವುದು. ದೊರಕಿದ ಆಹಾರವನ್ನು ಮೂರು ಸಮಭಾಗಗಳಾಗಿ ಹಂಚಿಕೊಳ್ಳುವುದು ಎಂದು ತೀರ್ಮಾನಿಸಿದವು.
ಮೊದಲ ದಿನವೇ ಮೂರೂ ಪ್ರಾಣಿಗಳು ಸೇರಿ ಒಂದು ದೊಡ್ಡ ಜಿಂಕೆಯನ್ನು ಬೇಟೆಯಾಡಿದವು. ಬೇಟೆಯಾದ ಮೇಲೆ ಸಿಂಹವು ಕತ್ತೆಯನ್ನು ಕುರಿತು, ಕತ್ತೆಯಣ್ಣ ಈ ಜಿಂಕೆಯ ಮಾಂಸವನ್ನು ಮೂರೂ ಭಾಗ ಮಾಡುವ ಕೆಲಸ ನಿನ್ನದು, ಎಂದಿತು. ತನಗೆ ಮೊದಲ ಆದ್ಯತೆ ಸಿಕ್ಕಿದ್ದಕ್ಕೆ ಕತ್ತೆಗೆ ತುಂಬಾ ಸಂತೋಷವಾಯಿತು. ತನ್ನ ಕೆಲಸವನ್ನು ನ್ಯಾಯಯುತವಾಗಿ ಮಾಡಬೇಕೆಂದು ನಿರ್ಧರಿಸಿ, ಮಾಂಸವನ್ನು ಸರಿಯಾಗಿ ಮೂರು ಭಾಗಗಳನ್ನಾಗಿ ಮಾಡಿತು. ನಂತರ ಸಿಂಹ ಮತ್ತು ನರಿಗಳನ್ನು ಕುರಿತು, ನೋಡಿ ನೀವು ಹೇಳಿದಂತೆ ಸರಿಯಾಗಿ ಮೂರು ಭಾಗ ಮಾಡಿದ್ದೇನೆ. ನಿಮ್ಮ ಭಾಗಗಳನ್ನು ನೀವು ಆರಿಸಿಕೊಂಡು ಬಿಡಿ. ಉಳಿದ ಭಾಗವನ್ನು ನಾನು ತೆಗೆದುಕೊಳ್ಳುತ್ತೇನೆ ಎಂದು ತುಸು ಹೆಮ್ಮೆಯಿಂದಲೇ ನುಡಿಯಿತು.
ಕತ್ತೆ ತನ್ನ ಮಾತು ಮುಗಿಸಿತ್ತೋ ಇಲ್ಲವೊ, ಅಷ್ಟರಲ್ಲಿ ದಿಗ್ಗನೆ ಕತ್ತೆಯ ಮೇಲೆರೆಗಿದ ಸಿಂಹ ಅದನ್ನು ಕಾಲಿನಿಂದ ಪರಚಿ, ಹಲ್ಲಿನಿಂದ ಕಚ್ಚಿ ಹಿಂಸೆ ಮಾಡಿಬಿಟ್ಟಿತು. ಕತ್ತೆಯಂತೂ ಅರೆಜೀವವಾಗಿ ಧೂಳಿನಲ್ಲಿ ಬಿದ್ದುಬಿಟ್ಟಿತು. ಆಗ ಸಿಂಹ ನರಿಯನ್ನು ಕುರಿತು, ನರಿಯಣ್ಣ, ಈ ಕತ್ತೆಗೆ ಸರಿಯಾಗಿ ಹಂಚಲು ಬರಲಿಲ್ಲ. ಈಗ ನೀನೇ ಆ ಕೆಲಸ ಮಾಡು, ಎಂದಿತು. ತಕ್ಷಣ ಕಾರ್ಯ ಪ್ರವೃತ್ತವಾದ ನರಿ, ಮಾಂಸದ ಮೂರೂ ಗುಡ್ಡೆಗಳನ್ನು ಒಟ್ಟು ಸೇರಿಸಿ, ಅದರಲ್ಲಿ ಒಂದೇ ಒಂದು ಸಣ್ಣ ಚೂರನ್ನು ತೆಗೆದು ತನ್ನ ಮುಂದೆ ಇಟ್ಟುಕೊಂಡು, ಉಳಿದುದೆಲ್ಲವನ್ನೂ ಸಿಂಹದ ಮುಂದೆ ಸರಿಸಿ ತನ್ನ ಕೆಲಸ ಮುಗಿಯಿತು ಎಂದಿತು. ಸಿಂಹಕ್ಕೆ ತುಂಬಾ ಸಂತೋಷವಾಯಿತು. ನರಿಯಣ್ಣ ನೀನು ತುಂಬಾ ಬುದ್ಧಿವಂತ. ಹಂಚಿಕೆಯನ್ನು ಸರಿಯಾಗಿ ಮಾಡಿದ್ದೀಯಾ. ನಿನಗೆ ಇದೆಲ್ಲವನ್ನು ಕಲಿಸಿದ ಆ ಗುರು ಯಾರು ಎಂದು ಗುಡ್ಡೆಯಲ್ಲಿದ್ದ ಮಾಂಸವನ್ನು ಕರಗಿಸತೊಡಗಿತು. ನರಿ ಮರುಕದಿಂದ ಕತ್ತೆಯ ಕಡೆ ನೋಡಿ, ಈ ಕತ್ತೆಯಣ್ಣನೇ ನನ್ನ ಗುರು ಎಂದಿತು.
ಮೆಚ್ಚಿದೆ ನಿನ್ನ ಬುದ್ಧಿವಂತಿಕೆಗೆ. ನೀನು ಇನ್ನು ಮೇಲೆ ನನ್ನ ಮಂತ್ರಿಯಾಗಿರು ಎಂದು ನರಿಗೆ ಹೇಳಿ, ಕತ್ತೆಯ ಕಡೆ ತಿರುಗಿ, ಮರುಕದಿಂದ ಒಂದು ಚೂರು ಮಾಂಸವನ್ನು ಅದರ ಮುಂದೆಸೆದು, ತಿನ್ನುವಂತೆ ಸೂಚಿಸಿತು. ಆಗ ಕತ್ತೆ ಸಿಂಹರಾಜನೇ, ನಿಮಗೆ ಗೊತ್ತಿಲ್ಲವೆನ್ನಿಸುತ್ತದೆ. ಈಗ್ಗೆ ಸ್ವಲ್ಪ ಹೊತ್ತಿನ ಮಂಚೆಯಿಂದ ನಾನು ಮಾಂಸಾಹಾರವನ್ನು ತ್ಯಜಿಸಿ, ಸಸ್ಯಹಾರದ ವ್ರತವನ್ನು ಕೈಗೊಂಡಿದ್ದೇನೆ. ಆದ್ದರಿಂದ ಈ ಮಾಂಸವೂ ನಿಮಗೆ ಅರ್ಪಿತವಾಗಲಿ ಎಂದು ನಮಸ್ಕರಿಸಿ, ಪಕ್ಕದಲ್ಲಿದ್ದ ಒಣಹುಲ್ಲಿಗೆ ಬಾಯಿ ಹಾಕಿತು.
ಅಂದಿನಿಂದ ಸಿಂಹ ಕಾಡಿನ ರಾಜನಾಯಿತು. ನರಿಯು ಅದರ ಹಿಂಬಾಲಕನಾಗಿ, ಸಿಂಹ ತಿಂದು ಬಿಟ್ಟ ಮಾಂಸದ ಚೂರನ್ನು ತಿನ್ನುತ್ತಾ ಜೀವಿಸಲಾರಂಭಿಸಿತು. ಕತ್ತೆ ಅವರೆಡರಿಂದಲೂ ದೂರವಾಗಿ ತನ್ನ ಸಸ್ಯಹಾರದ ವ್ರತವನ್ನು ಪಾಲಿಸುತ್ತಾ ಬದುಕಿಕೊಂಡಿತು.ಆರಂಭದಲ್ಲಿ ಎಲ್ಲಾ ಪ್ರಾಣಿಗಳೂ ಮಾಂಸಾಹಾರಿಗಳೇ ಆಗಿದ್ದುವು. ಒಮ್ಮೆ ಒಂದು ಕಾಡಿನಲ್ಲಿ ಒಂದು ಸಿಂಹ, ಒಂದು ಕತ್ತೆ ಮತ್ತು ಒಂದು ನರಿ ಸ್ನೇಹಿತರಾಗಿ ಒಟ್ಟಿಗೆ ಇದ್ದವು. ವಯಸ್ಸಾಗುತ್ತಾ ಬಂದಂತೆ ಅವುಗಳಿಗೆ ಒಬ್ಬೊಬ್ಬರೇ ಬೇಟೆಯಾಡಿ ಆಹಾರ ಗಳಿಸುವುದು ಕಷ್ಟವಾಯಿತು. ಮೂರೂ ಪ್ರಾಣಿಗಳು ಸಮಾಲೋಚಿಸಿ, ಮೂವರೂ ಒಟ್ಟಿಗೆ ಸೇರಿ ಬೇಟೆಯಾಡುವುದು. ದೊರಕಿದ ಆಹಾರವನ್ನು ಮೂರು ಸಮಭಾಗಗಳಾಗಿ ಹಂಚಿಕೊಳ್ಳುವುದು ಎಂದು ತೀರ್ಮಾನಿಸಿದವು.
ಮೊದಲ ದಿನವೇ ಮೂರೂ ಪ್ರಾಣಿಗಳು ಸೇರಿ ಒಂದು ದೊಡ್ಡ ಜಿಂಕೆಯನ್ನು ಬೇಟೆಯಾಡಿದವು. ಬೇಟೆಯಾದ ಮೇಲೆ ಸಿಂಹವು ಕತ್ತೆಯನ್ನು ಕುರಿತು, ಕತ್ತೆಯಣ್ಣ ಈ ಜಿಂಕೆಯ ಮಾಂಸವನ್ನು ಮೂರೂ ಭಾಗ ಮಾಡುವ ಕೆಲಸ ನಿನ್ನದು, ಎಂದಿತು. ತನಗೆ ಮೊದಲ ಆದ್ಯತೆ ಸಿಕ್ಕಿದ್ದಕ್ಕೆ ಕತ್ತೆಗೆ ತುಂಬಾ ಸಂತೋಷವಾಯಿತು. ತನ್ನ ಕೆಲಸವನ್ನು ನ್ಯಾಯಯುತವಾಗಿ ಮಾಡಬೇಕೆಂದು ನಿರ್ಧರಿಸಿ, ಮಾಂಸವನ್ನು ಸರಿಯಾಗಿ ಮೂರು ಭಾಗಗಳನ್ನಾಗಿ ಮಾಡಿತು. ನಂತರ ಸಿಂಹ ಮತ್ತು ನರಿಗಳನ್ನು ಕುರಿತು, ನೋಡಿ ನೀವು ಹೇಳಿದಂತೆ ಸರಿಯಾಗಿ ಮೂರು ಭಾಗ ಮಾಡಿದ್ದೇನೆ. ನಿಮ್ಮ ಭಾಗಗಳನ್ನು ನೀವು ಆರಿಸಿಕೊಂಡು ಬಿಡಿ. ಉಳಿದ ಭಾಗವನ್ನು ನಾನು ತೆಗೆದುಕೊಳ್ಳುತ್ತೇನೆ ಎಂದು ತುಸು ಹೆಮ್ಮೆಯಿಂದಲೇ ನುಡಿಯಿತು.
ಕತ್ತೆ ತನ್ನ ಮಾತು ಮುಗಿಸಿತ್ತೋ ಇಲ್ಲವೊ, ಅಷ್ಟರಲ್ಲಿ ದಿಗ್ಗನೆ ಕತ್ತೆಯ ಮೇಲೆರೆಗಿದ ಸಿಂಹ ಅದನ್ನು ಕಾಲಿನಿಂದ ಪರಚಿ, ಹಲ್ಲಿನಿಂದ ಕಚ್ಚಿ ಹಿಂಸೆ ಮಾಡಿಬಿಟ್ಟಿತು. ಕತ್ತೆಯಂತೂ ಅರೆಜೀವವಾಗಿ ಧೂಳಿನಲ್ಲಿ ಬಿದ್ದುಬಿಟ್ಟಿತು. ಆಗ ಸಿಂಹ ನರಿಯನ್ನು ಕುರಿತು, ನರಿಯಣ್ಣ, ಈ ಕತ್ತೆಗೆ ಸರಿಯಾಗಿ ಹಂಚಲು ಬರಲಿಲ್ಲ. ಈಗ ನೀನೇ ಆ ಕೆಲಸ ಮಾಡು, ಎಂದಿತು. ತಕ್ಷಣ ಕಾರ್ಯ ಪ್ರವೃತ್ತವಾದ ನರಿ, ಮಾಂಸದ ಮೂರೂ ಗುಡ್ಡೆಗಳನ್ನು ಒಟ್ಟು ಸೇರಿಸಿ, ಅದರಲ್ಲಿ ಒಂದೇ ಒಂದು ಸಣ್ಣ ಚೂರನ್ನು ತೆಗೆದು ತನ್ನ ಮುಂದೆ ಇಟ್ಟುಕೊಂಡು, ಉಳಿದುದೆಲ್ಲವನ್ನೂ ಸಿಂಹದ ಮುಂದೆ ಸರಿಸಿ ತನ್ನ ಕೆಲಸ ಮುಗಿಯಿತು ಎಂದಿತು. ಸಿಂಹಕ್ಕೆ ತುಂಬಾ ಸಂತೋಷವಾಯಿತು. ನರಿಯಣ್ಣ ನೀನು ತುಂಬಾ ಬುದ್ಧಿವಂತ. ಹಂಚಿಕೆಯನ್ನು ಸರಿಯಾಗಿ ಮಾಡಿದ್ದೀಯಾ. ನಿನಗೆ ಇದೆಲ್ಲವನ್ನು ಕಲಿಸಿದ ಆ ಗುರು ಯಾರು ಎಂದು ಗುಡ್ಡೆಯಲ್ಲಿದ್ದ ಮಾಂಸವನ್ನು ಕರಗಿಸತೊಡಗಿತು. ನರಿ ಮರುಕದಿಂದ ಕತ್ತೆಯ ಕಡೆ ನೋಡಿ, ಈ ಕತ್ತೆಯಣ್ಣನೇ ನನ್ನ ಗುರು ಎಂದಿತು.
ಮೆಚ್ಚಿದೆ ನಿನ್ನ ಬುದ್ಧಿವಂತಿಕೆಗೆ. ನೀನು ಇನ್ನು ಮೇಲೆ ನನ್ನ ಮಂತ್ರಿಯಾಗಿರು ಎಂದು ನರಿಗೆ ಹೇಳಿ, ಕತ್ತೆಯ ಕಡೆ ತಿರುಗಿ, ಮರುಕದಿಂದ ಒಂದು ಚೂರು ಮಾಂಸವನ್ನು ಅದರ ಮುಂದೆಸೆದು, ತಿನ್ನುವಂತೆ ಸೂಚಿಸಿತು. ಆಗ ಕತ್ತೆ ಸಿಂಹರಾಜನೇ, ನಿಮಗೆ ಗೊತ್ತಿಲ್ಲವೆನ್ನಿಸುತ್ತದೆ. ಈಗ್ಗೆ ಸ್ವಲ್ಪ ಹೊತ್ತಿನ ಮಂಚೆಯಿಂದ ನಾನು ಮಾಂಸಾಹಾರವನ್ನು ತ್ಯಜಿಸಿ, ಸಸ್ಯಹಾರದ ವ್ರತವನ್ನು ಕೈಗೊಂಡಿದ್ದೇನೆ. ಆದ್ದರಿಂದ ಈ ಮಾಂಸವೂ ನಿಮಗೆ ಅರ್ಪಿತವಾಗಲಿ ಎಂದು ನಮಸ್ಕರಿಸಿ, ಪಕ್ಕದಲ್ಲಿದ್ದ ಒಣಹುಲ್ಲಿಗೆ ಬಾಯಿ ಹಾಕಿತು.
ಅಂದಿನಿಂದ ಸಿಂಹ ಕಾಡಿನ ರಾಜನಾಯಿತು. ನರಿಯು ಅದರ ಹಿಂಬಾಲಕನಾಗಿ, ಸಿಂಹ ತಿಂದು ಬಿಟ್ಟ ಮಾಂಸದ ಚೂರನ್ನು ತಿನ್ನುತ್ತಾ ಜೀವಿಸಲಾರಂಭಿಸಿತು. ಕತ್ತೆ ಅವರೆಡರಿಂದಲೂ ದೂರವಾಗಿ ತನ್ನ ಸಸ್ಯಹಾರದ ವ್ರತವನ್ನು ಪಾಲಿಸುತ್ತಾ ಬದುಕಿಕೊಂಡಿತು.
ಚಿತ್ರಕೃಪೆ - ಕನ್ನಡಪ್ರಭ(ಖುಷಿ)

No comments: