Tuesday, January 18, 2011

ಪೆಜತ್ತಾಯರ 'ರೈತನಾಗುವ ಹಾದಿಯಲ್ಲಿ'

ಮಿತ್ರರೇ,
ಹಿರಿಯ ರೈತರಾದ ಶ್ರೀ ಮಧುಸೂದನ ಪೆಜತ್ತಾಯ (ಕೇಸರಿ) ಅವರ ರೈತನಾಗುವ ಹಾದಿಯಲ್ಲಿ ಪುಸ್ತಕ ಮುಂದಿನ ಮಂಗಳವಾರ ಲೋಕಾರ್ಪಣೆಯಾಗಲಿದೆ. (ಆಹ್ವಾನ ಪತ್ರಿಕೆ ಸಧ್ಯದಲ್ಲೇ ಬರಲಿದೆ). ಆ ಹಿನ್ನೆಲಯೆಲ್ಲಿ ಈ ಹಿಂದೆ ನನ್ನ ಬ್ಲಾಗಿನಲ್ಲಿ ಪ್ರಕಟವಾಗಿದ್ದ ಅವರ ಬರಹಗಳ ಲಿಂಕುಗಳನ್ನು ಮತ್ತೊಮ್ಮೆ ಇಲ್ಲಿ ನೀಡುತ್ತಿದ್ದೇನೆ.
ಕೊನೆಗೂ ಆ ಹುಲಿ ನನ್ನನ್ನು ಕಾಯಲೇ ಇಲ್ಲ! - ಶ್ರೀ ಮಧುಸೂದನ ಪೆಜತ್ತಾಯ
ಇಂದು ನಾನು ಮಣ್ಣಿನ ದಾಸನಾದೆ! - ಶ್ರೀ ಮಧುಸೂದನ ಪೆಜತ್ತಾಯ
ಪರಿಸರ ಪ್ರೇಮ ಬೆಳೆಸಿಕೊಳ್ಳಲು ಯಾರ ನಿರ್ಬಂಧವೂ ಇಲ್ಲ
‘ಕೇಸರಿ’ಗೇ ಒದ್ದ ‘ನಾಟಿದನ’ದಿಂದ ಮನೆಯ ಹೆಸರೇ ಬದಲಾಯಿತು!
ದಾನ್ ದಾನ್ ಪರ್ ಲಿಖಾ ಹೈ ತೇರಾ ನಾಮ್!
ರೈತನಾಗುವ ಹಾದಿಯಲ್ಲಿ . . .
ಕೆಂಡ ಸಂಪಿಗೆಯಲ್ಲಿ ಪ್ರಕಟವಾಗಿರುವ ಅವರ ಲೇಖನಗಳಿಗೆ ಪ್ರವೇಶವನ್ನು ಈ ಲಿಂಕ್ ಮೂಲಕ ಪಡೆದುಕೊಳ್ಳಬಹುದು.
http://www.kendasampige.com/article.php?id=3943
ಪೆಜತ್ತಾಯರ ಈ ಪುಸ್ತಕವನ್ನು ಪ್ರಕಟಿಸುವುದರೊಂದಿಗೆ, ಅವರನ್ನು ಸನ್ಮಾನಿಸುವ ಕನಸನ್ನು ನನಸು ಮಾಡುತ್ತಿರುವ, ಆ ಮೂಲಕ ನಾಡಿನ ರೈತ ಸಮುದಾಯಕ್ಕೆ ಗೌರವ ಸೂಚಿಸುವ ಕಾರ್ಯಕ್ಕೆ ಮುಂದಾಗಿರುವ ದೇಸಿ ಪ್ರಕಾಶನದ ಶ್ರೀ ಸೃಷ್ಟಿ ನಾಗೇಶ್ (ದೂ: 98450 96668;  ಈ ಮೇಲ್: srushtinagesh@gmail.com ) ಅವರಿಗೆ ನನ್ನ ಅಭಿನಂದನೆಗಳು.
ಶ್ರೀ ಪೆಜತ್ತಾಯ ಅಂದು














ಪೆಜತ್ತಾಯ ಇಂದು







ಪುಸ್ತಕ ಬಿಡುಗಡೆ ಹಾಗೂ ಸನ್ಮಾನ ಸಮಾರಂಭಕ್ಕೆ ಬನ್ನಿ, ನಿಮ್ಮ ಮನೆಯವರನ್ನೂ ಸ್ನೇಹಿತರನ್ನೂ ಕರೆತನ್ನಿ
ದಿನಾಂಕ: 25 ಜನವರಿ 2011
ಸಮಯ: ಸಂಜೆ 5.30
ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಬೆಂಗಳೂರು

ಮುಖ್ಯ ಅತಿಥಿಗಳಾಗಿ ಪ್ರಗತಿಪರ ರೈತರಾದ ನಾಡೋಜ ಶ್ರೀ ನಾರಾಯಣರೆಡ್ಡಿ ಹಾಗೂ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿಗಳು ಭಾಗವಹಿಸಲಿದ್ದಾರೆ. ಬರಹಗಾರರಾದ ಶ್ರೀ ರವಿ ಕೃಷ್ಣಾರೆಡ್ಡಿ ಹಾಗೂ ಶ್ರೀಮತಿ ಸಿಂಧು ಉಪಸ್ಥಿತರಿರುತ್ತಾರೆ.
ಸರ್ವರಿಗೂ ಸುಸ್ವಾಗತ

No comments: